Advertisement

10ರಂದು ಹಗರಿಬೊಮ್ಮನಹಳ್ಳಿ ವೆಂಕಟೇಶ್ವರ ರಥೋತ್ಸವ

08:00 AM Jan 30, 2019 | |

ಹಗರಿಬೊಮ್ಮನಹಳ್ಳಿ: ಫೆ.10ರಂದು ಪಟ್ಟಣದ ರಾಮನಗರದಲ್ಲಿ ನಡೆಯುವ 62ನೇ ವರ್ಷದ ಶ್ರೀವೆಂಕಟೇಶ್ವರ ರಥೋತ್ಸವವು ಅದ್ಧೂರಿಯಾಗಿ ನಡೆಯಲಿದ್ದು, ವೆಂಕಟೇಶ್ವರ ರಥದ ಗಡ್ಡೆಯನ್ನು ಹೊರ ಹಾಕಲಾಗಿದೆ ಎಂದು ವೆಂಕಟೇಶ್ವರಸ್ವಾಮಿ ದೇವಸ್ಥಾನದ ಧರ್ಮಕರ್ತ ನಾಣ್ಯಾಪುರ ಕೃಷ್ಣಮೂರ್ತಿ ತಿಳಿಸಿದರು.

Advertisement

ಪಟ್ಟಣದ ರಾಮನಗರದ ತೇರಿನ ಮನೆಯ ಬಳಿ ಮಾತನಾಡಿದ ಅವರು, ಫೆ. 5ರಂದು ಮಂಗಳವಾರ ವಿಳಂಬಿನಾಮ ಸಂವತ್ಸರದಲ್ಲಿ ಕಲಶ ಸ್ಥಾಪನೆ ಹಾಗೂ ಅಶ್ವೋತ್ಸವ, ದಿ. 6ರಂದು ಬುಧವಾರ ಹನುಮಂತೋತ್ಸವ, ಗುರುವಾರ ಗರುಡೋತ್ಸವ, ಶನಿವಾರ ಶ್ವೇತಗ‌ಜೋತ್ಸವ, ಫೆ.10ರಂದು ಪಂಚಮಿಯಂದು ಸಂಜೆ 5ಕ್ಕೆ ಶ್ರೀ ವೆಂಕಟೇಶ್ವರ ರಥೋತ್ಸವವು ಅದ್ಧೂರಿಯಾಗಿ ಜರುಗಲಿದೆ. ಫೆ.11ರಂದು ಸೋಮವಾರ ಕಡುಬಿನ ಕಾಳಗ, ಫೆ.12ರಂದು ಮಂಗಳವಾರ ಅವಭೃತ ಸ್ನಾನ ಹೀಗೆ 7 ದಿನಗಳ ಕಾಲ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ದಾನಿಗಳ ಕುಟುಂಬವರ್ಗದ ಮುಖ್ಯಸ್ಥರಾದ ಗಂಗಾವತಿ ವಿಜಯಕುಮಾರ್‌, ನಾಣಿಕೇರಿ ದೈವದ ಅಧ್ಯಕ್ಷ ಬಾರಿಕರ ಬಾಪೂಜಿ, ಹುಳ್ಳಿ ಪ್ರಕಾಶ್‌ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಾತಾಗ್ಯಾಸ್‌ ಯರ್ರಿಸ್ವಾಮಿ, ವಿಜೇತ, ವಸಂತ ಮಾಲವಿ, ಅರಸಿಕೇರಿ ಹನುಮಂತಪ್ಪ, ಬಾರಿಕರ ಹುಲುಗಪ್ಪ, ಗುಂಡ್ರ ಹನುಮಂತ, ಹೆಗ್ಡಾಳ್‌ ನಾರಾಯಣ, ಬಾರಿಕರ ಗಂಗಾಧರ, ಬಂಟ್ರ ಹುಲುಗಪ್ಪ, ಕಟಿಗಿ ರಫಿ, ಆಯಗಾರ ಪ್ರಮುಖರಾದ ಬಾರಿಕರ ನಿಂಗಪ್ಪ, ದಾಸರ ಹುಲುಗಪ್ಪ, ಅಂಬಾಡಿ ಗಾಳೆಪ್ಪ, ತಾಯಪ್ಪ, ಪಾದಗಟ್ಟಿ ಆಂಜನೇಯ ಸ್ವಾಮಿ ಸೇವಾ ಸಮಿತಿ ಸದಸ್ಯರು, ವೆಂಕಟೇಶ್ವರ ರಥೋತ್ಸವ ಸೇವಾ ಕರ್ತರು, ನಾಣಿಕೇರಿ ಬಂದುಗಳು, ರಾಮನಗರ ನಿವಾಸಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next