Advertisement

ಭಾರತ ವಿರೋಧಿ ಪ್ರಚಾರಕ್ಕೆ ಸಯೀದ್‌ನಿಂದ ಪಾಕ್‌ ಗುರುದ್ವಾರ ಬಳಕೆ

05:38 PM Apr 30, 2018 | udayavani editorial |

ಹೊಸದಿಲ್ಲಿ : ಪಾಕ್‌ ಮೂಲದ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯ ಮುಖ್ಯಸ್ಥ ಮತ್ತು 2008 ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಹಾಫೀಜ್‌ ಸಯೀದ್‌ ಭಾರತ ವಿರೋಧಿ ಪ್ರಚಾರ ಕಾರ್ಯಕ್ಕಾಗಿ ಪಾಕಿಸ್ಥಾನದಲ್ಲಿನ ಸಿಕ್ಖರ ಗುರುದ್ವಾರಗಳನ್ನು ಬಳಸಿಕೊಳ್ಳುತ್ತಿರುವುದಾಗಿ ವರದಿಯಾಗಿದೆ.

Advertisement

ಹಾಫೀಜ್‌ ಸಯೀದ್‌ನ ಈ ಅಪ ಪ್ರಚಾರದ ಅಭಿಯಾನ ಎಷ್ಟು ಯಶಸ್ವಿಯಾಗಿದೆ ಎಂದರೆ ಪಾಕಿಸ್ಥಾನದ ಸಿಕ್ಖ್ ಗುರುದ್ವಾರ ಪ್ರಬಂಧ ಸಮಿತಿ (ಪಿಎಸ್‌ ಜಿಪಿಸಿ) ಸಯೀದ್‌ ಈಚೆಗೆ ಸ್ಥಾಪಿಸಿರುವ ಮಿಲೀ ಮುಸ್ಲಿಮ್‌ ಲೀಗ್‌ (ಎಂಎಂಎಲ್‌) ರಾಜಕೀಯ ಪಕ್ಷವನ್ನು  ತಾನು ಬೆಂಬಲಿಸುವುದಾಗಿ ಬಹಿರಂಗವಾಗಿ ಹೇಳಿಕೊಂಡಿದೆ. 

ಪಿಎಸ್‌ಜಿಪಿಸಿ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಗೋಪಾಲ್‌ ಸಿಂಗ್‌ ಚಾವ್ಲಾ ಅವರು ಎಂಎಂಎಲ್‌ಗೆ ಬೆಂಬಲ ಘೋಷಿಸಿರುವುದು ಮಾತ್ರವಲ್ಲದೆ ಅದರ ಸಭೆಗಳನ್ನು ಸಿಕ್ಖರ ಮೊದಲ ಗುರು, ಗುರು ನಾನಕ್‌ ದೇವ್‌ ಅವರ ಜನ್ಮ ಸ್ಥಳವಾದ ಪಾಕಿಸ್ಥಾನದಲ್ಲಿನ ನಾನಕ್‌ ಸಾಹಿಬ್‌ನಲ್ಲಿ ಕಳೆದ ಶನಿವಾರ ಸಂಜೆ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next