Advertisement

ಜಿಲ್ಲಾದ್ಯಂತ ಕ್ರಿಸ್‌ಮಸ್‌ ಸಡಗರ

05:18 PM Dec 26, 2019 | Naveen |

ಹಾವೇರಿ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಶಾಂತಿಧೂತ ಏಸು ಕ್ರಿಸ್ತನ ಜಯಂತಿ ಅಂಗವಾಗಿ ಜಿಲ್ಲೆಯಾದ್ಯಂತ ಬುಧವಾರ ಕ್ರಿಸ್‌ ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರ-ಸಂಭ್ರಮದಿಂದ ಆಚರಿಸಿದರು.ಕ್ರೈಸ್ತ ಸಮಾಜದ ಕ್ಯಾಥೋಲಿಕ್‌ ಮತ್ತು ಪ್ರೊಟೆಸ್ಟ್‌

Advertisement

ಪಂಥಗಳ ಅನಿಯಾಯಿಗಳು ಚರ್ಚ್‌ಗಳಲ್ಲಿ ಮೊಂಬತ್ತಿಗಳನ್ನು ಬೆಳಗಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ ಜೋಸೆಫ್‌ ಹಾಗೂ ಮೇರಿ ಅವರಿಗೆ ನಮಿಸಿದರು.

ಕೆಲವರು ಮನೆಗಳಲ್ಲಿಯೇ ಗೋದಲಿ ನಿರ್ಮಿಸಿ, ವಿದ್ಯುದಲಂಕಾರ ಮಾಡಿ ಯೇಸು ಜಯಂತಿಯ ಸಂಭ್ರಮ ಮೆರೆದರು. ಕ್ರೈಸ್ತ ಬಾಂಧವರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡು ಸಿಹಿ ವಿತರಿಸಿ ಸಂಭ್ರಮಿಸಿದರು. ನಗರದ ಸೇಂಟ್‌ ಜಾನ್ಸ್‌ ಚರ್ಚ್‌ನಲ್ಲಿ ವಿಶೇಷ ಪಾರ್ಥನೆ ಸಲ್ಲಿಸಲಾಯಿತು. ನಗರದ ದೇವಧರ ಆಸ್ಪತ್ರೆ ಆವರಣದಲ್ಲಿನ ಗುರು ಕೃಪಾ ಚರ್ಚ್‌ನಲ್ಲಿ ಬಿಶಫ್‌ (ಫಾದರ್‌) ನೇತೃತ್ವದಲ್ಲಿ ಕ್ರೈಸ್ತ್ ಸಮಾಜ ಬಾಂಧವರು ಮೇಣದ ಬತ್ತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ನಿಮಿತ್ತ ನಗರದ ಚರ್ಚ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್ ನಲ್ಲಿ ನಿರ್ಮಿಸಿದ್ದ ಕ್ರಿಸ್‌ಮಸ್‌ ಟ್ರೀ ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next