Advertisement

ಗಂಡನನ್ನು ಕಂಡು ಮಾತನಾಡುವಾಸೆ: ಹದಿಯಾ ಪುನರುಚ್ಚಾರ

12:18 PM Nov 29, 2017 | Team Udayavani |

ಸೇಲಂ : ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಇಲ್ಲಿನ ಹೋಮಿಯೋಪತಿ ಮೆಡಿಕಲ್‌ ಕಾಲೇಜಿನಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಲು ಬಂದ ಒಂದು ದಿನದ ತರುವಾಯ, ಆರೋಪಿತ ಲವ್‌ ಜಿಹಾದ್‌ ಪ್ರಕರಣದ ಕೇಂದ್ರ ಬಿಂದು ಹದಿಯಾ “ನಾನು ನನ್ನ ಗಂಡನನ್ನು ಭೇಟಿಯಾಗಲು ಮತ್ತು ಮಾತನಾಡಲು ಬಯಸಿದ್ದೇನೆ’ ಎಂದು ಪುನರುಚ್ಚರಿಸಿದ್ದಾಳೆ. 

Advertisement

“ಕಳೆದ ಆರು ತಿಂಗಳಿಂದ ನಾನು ನನಗೆ ಇಷ್ಟವಿಲ್ಲದವರ ಜತೆಗೆ (ಹೆತ್ತವರು) ಮಾನಾಡುವ ಅನಿವಾರ್ಯತೆಗೆ ಗುರಿಯಾಗಿದ್ದೆ; ಕಾರಣ ಅವರು ನನಗೆ ಅಸಹನೀಯ ಹಿಂಸೆ, ಕಿರುಕುಳ ನೀಡುತ್ತಿದ್ದರು.ಈಗ ನಾನು ಮುಕ್ತಳಾಗಿರುವುದರಿಂದ ನನ್ನ ಗಂಡನನ್ನು ಕಂಡು ಮಾತನಾಡಿಸಬೇಕು ಎಂಬ ಆಸೆ ನನ್ನಲ್ಲಿ ಚಿಗರೊಡೆದಿದೆ’ ಎಂದು ಹದಿಯಾ ಇಲ್ಲಿನ ಶಿವರಾಜ್‌ ಹೋಮಿಯೋಪತಿ ಮೆಡಿಕಲ್‌ ಕಾಲೇಜಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಸುಪ್ರೀಂ ಕೋರ್ಟ್‌ ನಿಂದ ಶಿಕ್ಷಣ ಮುಂದುವರಿಸುವ ಆದೇಶ ಪಡೆದು ಮುಕ್ತಳಾಗಿರುವ 25ರ ಹರೆಯದ ಹದಿಯಾಳನ್ನು ಕೇರಳ ಪೊಲೀಸರು ನಿನ್ನೆ ಇಲ್ಲಿಂದ 170 ಕಿ.ಮೀ. ದೂರದ ಕೊಯಮುತ್ತೂರಿನಿಂದ ಇಲ್ಲಿಗೆ ಬಿಗಿ ಭದ್ರತೆಯಲ್ಲಿ ಕರೆ ತಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next