Advertisement

ಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

12:03 AM Jun 15, 2024 | Team Udayavani |

ಚಿಕ್ಕಬಳ್ಳಾಪುರ: ಅಖಾಡದಲ್ಲಿ ನಾನೇ ಇದ್ದಿದ್ದರೆ ಲೋಕಸಭಾ ಚುನಾವಣೆ ಗೇಮ್‌ ಬೇರೆಯೇ ರೀತಿ ಇರುತ್ತಿತ್ತು ಎನ್ನುವ ಮೂಲಕ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌, ಪರೋಕ್ಷವಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಸರಿ ಇರಲಿಲ್ಲ ಎಂಬ ರೀತಿಯಲ್ಲಿ ಪಕ್ಷದ ಸೋಲಿನ ಬಗ್ಗೆ ತಮ್ಮದೇ ಧಾಟಿಯಲ್ಲಿ ವಿಶ್ಲೇಷಣೆ ಮಾಡಿದರು.

Advertisement

ನಗರದಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾರ್ಡ್‌ ನಿವಾಸಿಗಳ ಕುಂದುಕೊರತೆ ಆಲಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ| ಕೆ.ಸುಧಾಕರ್‌ ಕಾಂಗ್ರೆಸ್‌ಗಿಂತ ಒಂದು ಮತ ಹೆಚ್ಚು ಪಡೆದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ. ಈಗಲೂ ರಾಜೀನಾಮೆ ನೀಡಲು ಬದ್ಧ. ಆದರೆ, ನನ್ನ ಸವಾಲನ್ನು ಅವರು (ಡಾ|ಕೆ.ಸುಧಾಕರ್‌) ಸ್ವೀಕರಿಸಿರಲಿಲ್ಲ ಎಂದರು.

ನೀವು ಬಟ್ಟೆ ಹರಿದುಕೊಳ್ಳಬೇಡಿ!: ಶಾಸಕ
ನಾನು, ನನ್ನ ಹೆಂಡತಿ ಸಂತೋಷ ಇದ್ದೇವೆ. ಡಾ| ಕೆ. ಸುಧಾಕರ್‌ ಕೂಡ ದಿಲ್ಲಿಯಲ್ಲಿ ಸಂತೋಷದಿಂದಿದ್ದಾರೆ. ನೀವು ಯಾಕೆ (ಕಾರ್ಯಕರ್ತರು) ನಮಗೋಸ್ಕರ ಬಟ್ಟೆ ಹರಿಕೊಳ್ಳುತ್ತೀರಿ ಎಂದು ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರಿಗೆ ಶಾಸಕ ಪ್ರದೀಪ್‌ ಈಶ್ವರ್‌ ಬುದ್ಧಿವಾದ ಹೇಳಿದರು. ನಿಮಗೆ ನಮ್ಮ ಮೇಲೆ ಪ್ರೀತಿ ಇದ್ದರೆ ಜತೆಗೆ ಬನ್ನಿ, ಸಾಧ್ಯವಾದರೆ ಎಲ್ಲರೂ ಸೇರಿ ತಿಂಡಿ ಸವಿಯೋಣ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next