Advertisement

ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತ ನಂತರ ಯಾವ ನಾಯಿಯಾಗಿದ್ದಾರೆ? ವಿಶ್ವನಾಥ್ ಟೀಕೆ

03:59 PM Nov 01, 2020 | keerthan |

ಮೈಸೂರು: ಉಪ ಚುನಾವಣೆ ಬಳಿಕ ಬಿಜೆಪಿ ಸೇರಿದ 17 ಜನರ ಸ್ಥಿತಿ ನಾಯಿ ಪಾಡಾಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಯಾವ ನಾಯಿಯಾಗಿದ್ದಾರೆ ಅಂತಾ ಮೊದಲು ಹೇಳಿ? ಅವರು ಏನಾಗಿದ್ದಾರೆ ಅಂತಾ ಅರ್ಥ ಮಾಡಿಕೊಂಡು ಉಳಿದವರ ಬಗ್ಗೆ ಮಾತಾಡಲಿ ಎಂದಿದ್ದಾರೆ.

Advertisement

ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವ ನಾಯಿಯಾಗಿದ್ದಾರೆ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾದಾಮಿ ತನಕ ಓಡಿ ಹೋದವರು ಯಾರು ಎಂದು ಟೀಕಿಸಿದರು.

ಆರ್ ಆರ್ ನಗರ ಹಾಗೂ ಶಿರಾ ಕ್ಷೇತ್ರ ಎರಡರಲ್ಲೂ ನಾವು ಗೆಲ್ಲುತ್ತೇವೆ. ಈ ಚುನಾವಣೆಯಲ್ಲಿ ಗೆದ್ದ ಮೇಲೆ ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗಲಿದೆ, ಯಡಿಯೂರಪ್ಪ ಸರಕಾರಕ್ಕೆ  ಜನ ಬೆಂಬಲವಿದೆ ಎಂಬ ಸಂದೇಶ ರವಾನೆ ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next