Advertisement

ಎಚ್‌.ವಿಶ್ವನಾಥ್‌ ಪೆದ್ದನೋ, ಜಾಣನೋ ಗೊತ್ತಿಲ್ಲ: ಸಿದ್ದರಾಮಯ್ಯ

09:30 PM Jun 19, 2020 | Sriram |

ಮೈಸೂರು: ಎಚ್‌.ವಿಶ್ವನಾಥ್‌ ಪೆದ್ದನೋ, ಜಾಣನೋ ಗೊತ್ತಿಲ್ಲ. ನಾನು ಕಾಂಗ್ರೆಸ್‌ನಲ್ಲಿದ್ದೇನೆ, ವಿಶ್ವನಾಥ್‌ ಬಿಜೆಪಿಯಲ್ಲಿದ್ದಾರೆ. ನಾನು ಹೇಗೆ ಟಿಕೆಟ್‌ ತಪ್ಪಿಸಲು ಸಾಧ್ಯ? ನನ್ನ ಬಗ್ಗೆ ಹತಾಶೆಯಿದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

Advertisement

ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿ, ಬಿಜೆಪಿ ಹೈಕಮಾಂಡ್‌ಗೂ ನನಗೂ ಸಂಬಂಧ ಇಲ್ಲ. ಸುಮ್ಮನೇ ಹತಾಶೆಯಿಂದ ಮಾತನಾಡಬಾರದು ಎಂದು ಟಾಂಗ್‌ ನೀಡಿದರು.

ಬಿಎಸ್‌ವೈಗೆ ಧಮ್‌ ಇಲ್ಲ: ಕೇಂದ್ರ ಸರಕಾರ ಹೇಳಿದಂತೆ ತಲೆಯಾಡಿಸುವ ಸಿಎಂ ಯಡಿಯೂರಪ್ಪ ಅವರಿಗೆ ಮೋದಿ ಮುಂದೆ ಮಾತನಾಡಲು ಧಮ್‌ ಇಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5049 ಕೋಟಿ ರೂ. ಬಿಡುಗಡೆ ಮಾಡದೆ ಇದ್ದರೂ ಈವರೆಗೆ ಕೇಳಿಲ್ಲ ಎಂದರು.

ರಾಜಕೀಯ ಕಾರಣಕ್ಕಾಗಿ ಜನಪರ ಯೋಜನೆಗಳನ್ನು ಕೈಬಿಡಬಾರದು. ಇಂದಿರಾ ಕ್ಯಾಂಟೀನ್‌ನಿಂದ ನನಗೆ ಕ್ರೆಡಿಟ್‌ ಸಿಗುತ್ತದೆ ಎಂಬ ಕಾರಣಕ್ಕೆ ನಿಲ್ಲಿಸಿದ್ದಾರೆ. ಜನರಿಗೆ ಉಪಯೋಗ ಆಗುವುದನ್ನು ಮುಂದುವರಿಸಬೇಕೇ ಹೊರತು ರಾಜಕೀಯ ತೀರ್ಮಾನದಲ್ಲಿ ನೋಡಬಾರದು ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next