Advertisement

ಸಿದ್ದರಾಮಯ್ಯಗೆ ಗೊತ್ತಿರುವುದು ಒಂದೇ ಸಂಧಿ! ವಿಶ್ವನಾಥ್ ವ್ಯಂಗ್ಯ

12:29 PM Oct 05, 2017 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏಕವಚನವೂ ಗೊತ್ತಿಲ್ಲ, ಬಹುವಚನವು ಗೊತ್ತಿಲ್ಲ. ವ್ಯಾಕರಣವೇ ಗೊತ್ತಿಲ್ಲ, ಇಂತಹವರು ಸಂಧಿ ಬಗ್ಗೆ ಪಾಠ ಮಾಡೋಕೆ ಬರ್ತಾರೆ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

Advertisement

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ನಾನೇ ಅತೀ ಹೆಚ್ಚು ಅನುದಾನವನ್ನು ಮೈಸೂರಿಗೆ ನೀಡಿದ್ದೇನೆ ಎಂದು ಸಿಎಂ ಹೇಳುತ್ತಾರೆ. ಹೌದು ಅತೀ ಹೆಚ್ಚು ಅನುದಾನ ನೀಡಿದ್ದು ಸತ್ಯ, ಅದು ದೊಡ್ಡ ಮೊತ್ತದ ಕಿಕ್ ಬ್ಯಾಕ್ ಪಡೆದುಕೊಂಡು ಎಂಬುದಾಗಿ ಆರೋಪಿಸಿದರು.

ಸಿಎಂ ಸಿದ್ದರಾಮಯ್ಯಗೆ ಗೊತ್ತಿರುವುದು ಒಂದೇ ಸಂಧಿ, ಆ ಸಂಧಿ ಯಾವುದು ಅಂತ ನನಗೆ ಗೊತ್ತಿಲ್ಲಪ್ಪ ಎಂದು ವಿಶ್ವನಾಥ ಈ ಸಂದರ್ಭದಲ್ಲಿ ಚಾಟಿ ಬೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next