Advertisement

ಕಾಲ ಬಂದೇ ಬರುತ್ತೆ, ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ: ಎಚ್.ಡಿ. ದೇವೇಗೌಡ

10:04 AM Sep 21, 2019 | Team Udayavani |

ಬೆಂಗಳೂರು: ನಾನು ಮಾತನಾಡುವುದು ಬಹಳ ಇದೆ. ಕಾಲ ಬಂದೇ ಬರುತ್ತೆ, ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿರುವುದು ಹೌದು. ಕುಮಾರಸ್ವಾಮಿ ಟ್ವಿಟ್ ಮಾಡಿರುವುದು ಸರಿಯಾಗಿಯೇ ಇದೆ. ರಾಜಕಾರಣ ನಾಳೆಗೆ ನಿಲ್ಲಲ್ಲ. ನನ್ನ ರಾಜಕಾರಣ ನಿಲ್ಲಲ್ಲ, ಯಡಿಯೂರಪ್ಪ ಅವರದೂ ನಿಲ್ಲಲ್ಲ, ಸಿದ್ದರಾಮಯ್ಯ ಅವರದೂ ನಿಲ್ಲಲ್ಲ ಎಂದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ, ರಾಜಕಾರಣ ನಿಂತ ನೀರಲ್ಲ ಎಂದು ದೇವೇಗೌಡರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next