Advertisement

ವಿವಾದಿತ ಕಾಶಿ ವಿಶ್ವನಾಥ-ಗ್ಯಾನವಾಪಿ ಮಸೀದಿ ವಕ್ಫ್ ಗೆ ಸೇರಿಲ್ಲ

10:24 PM Apr 29, 2022 | Team Udayavani |

ಪ್ರಯಾಗ್‌ರಾಜ್‌: ವಿವಾದಿತ ಕಾಶಿ ವಿಶ್ವನಾಥ-ಗ್ಯಾನವಾಪಿ ಮಸೀದಿ ವಿಚಾರಣೆಯನ್ನು ಅಲಹಾಬಾದ್‌ ಉಚ್ಚ ನ್ಯಾಯಾಲಯ ಮುಂದುವರಿಸಿದೆ.

Advertisement

ಕಾಶಿ ವಿಶ್ವನಾಥ ಮಂದಿರದ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಜಯ್‌ ಶಂಕರ್‌ ರಸ್ತೋಗಿ; ಗ್ಯಾನವಾಪಿ ಮಸೀದಿ ವಕ್ಫ್ ಇಲಾಖೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದಿದ್ದಾರೆ.

ಒಂದು ವೇಳೆ ಇದು ವಕ್ಫ್ ವ್ಯಾಪ್ತಿಯಲ್ಲಿದೆ ಎಂದಿಟ್ಟುಕೊಂಡರೂ, ಅದರಿಂದ ಹಿಂದುಗಳ ಹಕ್ಕಿಗೇನು ಸಮಸ್ಯೆಯಿಲ್ಲ. ಏಕೆಂದರೆ ವಕ್ಫ್ ಮುಸ್ಲಿಮರಿಗೆ ಸಂಬಂಧಿಸಿದ್ದೇ ಹೊರತು ಹಿಂದುಗಳಿಗಲ್ಲ ಎಂದಿದ್ದಾರೆ.

ಅಂಜುಮಾನ್‌ ಇಂತಜಾಮಿಯ ಮಸೀದಿ ಪರ ವಕೀಲರು ಮಸೀದಿ ಒಂದು ಕಾಲದಲ್ಲಿ ವಕ್ಫ್ ಭಾಗವಾಗಿತ್ತು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಸ್ತೋಗಿ, 1995ರಲ್ಲಿ ವಕ್ಫ್ ಕಾಯ್ದೆ ಜಾರಿಯಾಗುವುದಕ್ಕೆ ಹಿಂದೊಮ್ಮೆ ಈ ಮಸೀದಿ ವಕ್ಫ್ ಗೆ ಸೇರಿತ್ತು. ಕಾಯ್ದೆ ಜಾರಿಯಾದ ಮೇಲೆ ಮಸೀದಿ ವಕ್ಫ್ ಗೆ ಸೇರಿಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next