Advertisement

ಆಸೀಸ್‌ಗಳ ಮೇಲೆ ಕಲ್ಲೆಸೆತ: ಕ್ರಿಕೆಟ್‌ ಪ್ರೇಮಿಗಳಿಂದ ಕ್ಷಮೆಯಾಚನೆ

03:59 PM Oct 12, 2017 | Team Udayavani |

ಹೊಸದಿಲ್ಲಿ : ಗುವಾಹಟಿಯಲ್ಲಿ ಕಳೆದ ಅ.10ರಂದು ನಡೆದಿದ್ದ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ಮೂರು ಪಂದ್ಯಗಳ ಹಾಲಿ ಸರಣಿಯಲ್ಲಿ  1-1ರ ವೀರೋಚಿತ ಸಮಬಲವನ್ನು ಸಾಧಿಸಿದ ಪ್ರವಾಸಿ ಆಸ್ಟ್ರೇಲಿಯ ಕ್ರಿಕೆಟ್‌ ತಂಡ, ಪಂದ್ಯ ಮುಗಿದ ಬಳಿಕ ತಮ್ಮ ವಾಸ್ತವ್ಯದ ಹೊಟೇಲಿಗೆ ಮರಳುತ್ತಿದ್ದ ವೇಳೆ ಅವರ ಬಸ್ಸಿನ ಮೇಲೆ ಕಲ್ಲೆಸೆಯಲಾದ ಅತ್ಯಂತ ನಾಚಿಕೆಗೇಡಿನ ವಿದ್ಯಮಾನಕ್ಕೆ ಗುವಾಹಟಿಯ ಅನೇಕ ಕ್ರಿಕೆಟ್‌ ಅಭಿಮಾನಿಗಳು ಪ್ರವಾಸಿಗರಲ್ಲಿ ಕ್ಷಮೆಯಾಚಿಸುವುದಕ್ಕಾಗಿ ಅವರ ವಾಸ್ತವ್ಯದ ಹೊಟೇಲ್‌ ಮುಂದೆ ಕ್ಷಮಾ ಫ‌ಲಕಗಳನ್ನು ಹಿಡಿದು ಸಾಲುಗಟ್ಟಿ ನಿಂತು ಕ್ರೀಡಾ ಸದ್ಭಾವನೆಯನ್ನು ಪ್ರಕಟಿಸಿದ್ದಾರೆ.

Advertisement

ಆಸ್ಟ್ರೇಲಿಯ ಕ್ರಿಕೆಟಿಗಳು ಎರಡೇ ತಿಂಗಳಲ್ಲಿ ಅನುಭವಿಸಿರುವ ಎರಡನೇ ಕಲ್ಲೆಸೆತದ ಪ್ರಕರಣ ಇದಾಗಿದೆ. ಕಳೆದ ಸೆಪ್ಟಂಬರ್‌ನಲ್ಲಿ ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಟೆಸ್ಟ್‌ ಪಂದ್ಯದ ವೇಳೆ ಆಸೀಸ್‌ ಆಟಗಾರರ ಮೇಲೆ ಕಲ್ಲೆಸೆಯಲಾಗತ್ತು. ಗುವಾಹಟಿಯಲ್ಲಿ ಆಸೀಸ್‌ ಆಟಗಾರರ ಬಸ್ಸಿನ ಮೇಲೆ ಎಸೆಯಲಾದ ಕಲ್ಲು ಕ್ರಿಕೆಟ್‌ ಚೆಂಡಿನ ಗಾತ್ರದ್ದಾಗಿತ್ತು. ಬಸ್ಸಿನ ಕಿಟಕಿ ಗಾಜು ಕಲ್ಲೆಸತಕ್ಕೆ ಹಾನಿಗೊಂಡು ಆಟಗಾರರಲ್ಲಿ ತೀವ್ರ ಭಯ, ಆತಂಕ ಸೃಷ್ಟಿಸಿತಾದರೂ ಯಾವೊಬ್ಬ ಆಟಗಾರನೂ ಗಾಯಗೊಂಡಿರಲಿಲ್ಲ. 

ಎರಡನೇ ಟಿ-20 ಪಂದ್ಯದಲ್ಲಿ ಧೋನಿ ಮತ್ತು ಕೇದಾರ್‌ ಜಾಧವ್‌ ಅವರ ವಿಕೆಟನ್ನು ಕಿತ್ತಿದ್ದ ಲೆಗ್‌ ಸ್ಪಿನ್ನರ್‌ ಆ್ಯಡಂ ಝಂಪಾ ಅವರು, “ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನಿರಾಶಾದಾಯಕ ಪ್ರಕರಣ’ ಎಂದು ಪ್ರತಿಕ್ರಿಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next