Advertisement

Gurupura Kaikamba ಪೇಟೆ; ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿಯ ತ್ಯಾಜ್ಯ ನೀರು

04:14 PM Apr 14, 2023 | Team Udayavani |

ಕೈಕಂಬ: ಗುರುಪುರ-ಕೈಕಂಬ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಗಳು ನಡೆಯುತ್ತಿದ್ದು ಗಂಜಿ ಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚರಂಡಿಗಳ ಮೇಲೆ ಮಣ್ಣು ಹಾಕಿದ ಕಾರಣ ಚರಂಡಿಯಲ್ಲಿ ಹರಿಯುವ ನೀರು ಈಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ಹೋಗುತ್ತಿದೆ. ಹೆದ್ದಾರಿಯೇ ತ್ಯಾಜ್ಯ ನೀರು ಶೇಖರಣೆಯಾಗಿ ಪರಿಸರವೆಲ್ಲ ದುರ್ನಾತ ಹಾಗೂ ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ಈ ಚರಂಡಿಯಲ್ಲಿ ಹೊಟೇಲ್‌, ಅಂಗಡಿಗಳ ತ್ಯಾಜ್ಯ ನೀರು ಈ ರೀತಿ ಯಾಗಿ ಹರಿದು ಹೋಗುತ್ತಿದೆ. ಕೆಟ್ಟವಾಸನೆಯಿಂದ ಜತೆಗೆ ವಾಹನಗಳು ಸಂಚರಿ ಸುವಾಗ ತ್ಯಾಜ್ಯ ನೀರು ಪಾದಚಾರಿಗಳ ಮೇಲೆ ಎರಚಲ್ಪಡುತ್ತಿದೆ.

Advertisement

ತ್ಯಾಜ್ಯ ನೀರು ಹೆದ್ದಾರಿಯ ಪಕ್ಕದಲ್ಲಿಯೇ ಶೇಖರಣೆ
ಚರಂಡಿಯಲ್ಲಿ ತುಂಬಿ ತುಳುಕುವ ತ್ಯಾಜ್ಯ ನೀರು ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಯಿಂದ ಹರಿದು ಹೆದ್ದಾರಿ ಇನ್ನೊಂದು ಬದಿ ಯಲ್ಲಿ ಶೇಖರಣೆಯಾಗಿದೆ. ಇದು ಸೊಳ್ಳೆ ಉತ್ಪತ್ತಿಗೆ ಕಾರಣವಾಗಲಿದೆ. ಮಧ್ಯಾಹ್ನ 11ರ ವೇಳೆ ಮತ್ತು ಸಂಜೆ ವೇಳೆಗೆ ತ್ಯಾಜ್ಯ ನೀರಿನ ಪ್ರಮಾಣ ಜಾಸ್ತಿಯಾಗಿರುತ್ತದೆ. ಪ್ರಮಾಣ ಜಾಸ್ತಿಯಾದಂತೆ ವಾಹನ ಸಂಚರಿಸುವಾಗ ತ್ಯಾಜ್ಯ ನೀರು ದೂರದವರೆಗೆ ಎರಚಲ್ಪಡುತ್ತದೆ.

ತಾತ್ಕಾಲಿಕ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ
ಚರಂಡಿಯಲ್ಲಿ ಹೊಟೇಲ್‌ ಹಾಗೂ ವಸತಿ ಸಮುಚ್ಚಯ, ಅಂಗಡಿಗಳ ತ್ಯಾಜ್ಯ ನೀರು ಹರಿಯುತ್ತಿದೆ. ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಇಂಗು ಗುಂಡಿ ತೆಗೆದು ಅದರಲ್ಲಿ ಬಿಡಬೇಕು. ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಹೆದ್ದಾರಿ ಇಲಾಖೆ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಗಮನಿಸಿ ಶೀಘ್ರ ಕಾರ್ಯವೆಸಗಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ. ಈ ಬಗ್ಗೆ ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗೆ ತಿಳಿಸಲಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next