Advertisement

ಕಡೆಗೂ ಗುರುಪುರ ಸೇತುವೆ ದುರಸ್ತಿ: ಬದಲಿ ಮಾರ್ಗ ವ್ಯವಸ್ಥೆ

09:48 AM Nov 08, 2019 | keerthan |

ಗುರುಪುರ: ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಗುರುಪುರ ಸೇತುವೆಯ ಗುಂಡಿ ಮುಚ್ಚುವ ಕಾರ್ಯ ಗುರುವಾರ ನಡೆಯುತ್ತಿದ್ದು, ಈ ಕಾರಣದಿಂದ ಸೇತುವೆ ಮೇಲೆ ಒಂದು ದಿನದ ಮಟ್ಟಿಗೆ ವಾಹನ ಸಂಚಾರ ನಿರ್ಭಂಧಿಸಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಈ ಬಗ್ಗೆ ಪ್ರಕಟನೆ ಹೊರಡಿಸಿ ಬದಲಿ ಮಾರ್ಗ ಬಳಸಲು ಸೂಚನೆ ನೀಡಿದ್ದರು.

ಇಂದು ಮುಂಜಾನೆ ಆರರಿಂದ ಸಂಜೆ ಆರರವರೆಗೆ ದುರಸ್ಥಿ ನಡೆಸಲು ಅವಕಾಶ ನೀಡಿಲಾಗಿದೆ. ಹೀಗಾಗಿ ಇಂದು ಮುಂಜಾನೆಯಿಂದಲೇ ದುರಸ್ಥಿ ಕಾರ್ಯ ಆರಂಭವಾಗಿದೆ.

ಬದಲಿ ಮಾರ್ಗ

Advertisement

ಮೂಡುಬಿದಿರೆಯಿಂದ ಮಂಗಳೂರಿನತ್ತ ಸಾಗುವ ವಾಹನಗಳು ಕೈಕಂಬ-ಬಜಪೆ- ಮರವೂರು ರಸ್ತೆ ಮೂಲಕ ಮತ್ತು ಕೈಕಂಬ- ಪೊಳಲಿ-ಬಿ.ಸಿ. ರೋಡ್‌ ಮೂಲಕ ಮಂಗಳೂರು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಸಾಗುವ ವಾಹನಗಳು ಮಂಗಳೂರು-ಮರವೂರುಸೇತುವೆ-ಬಜಪೆ-ಕೈಕಂಬವಾಗಿ ಮೂಡುಬಿದಿರೆ ತಲುಪಬೇಕಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next