Advertisement

ಕುಡಿದ ಮತ್ತಿನಲ್ಲಿದ್ದ ರೈಲ್ವೆ ಪೊಲೀಸ್‌ ಅಧಿಕಾರಿಯ ಪಿಸ್ತೂಲ್‌ ನಿಂದಲೇ ಹತ್ಯೆಗೈದ ಪತ್ನಿ!

06:26 PM Nov 03, 2023 | Team Udayavani |

ಗುರುಗ್ರಾಮ್:‌ ವಾಕ್ಸಮರ ಮಿತಿಮೀರಿ ತಾಳ್ಮೆ ಕಳೆದುಕೊಂಡ ಪತ್ನಿ ಮದ್ಯಪಾನ ಸೇವಿಸಿ ಗಲಾಟೆ ಮಾಡುತ್ತಿದ್ದ ರೈಲ್ವೆ ಪೊಲೀಸ್‌ ಅಧಿಕಾರಿಯ ಸೊಂಟದಲ್ಲಿದ್ದ ಗನ್‌ ಕಸಿದುಕೊಂಡು, ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ಗುರುಗ್ರಾಮ್‌ ನಲ್ಲಿ ನಡೆದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:Chikkamagaluru 10 ಸಾವಿರ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಡಿಡಿಪಿಐ

ಮೃತ ರೈಲ್ವೆ ಅಧಿಕಾರಿಯನ್ನು ರಾಜ್ಬೀರ್‌ (49ವರ್ಷ) ಎಂದು ಗುರುತಿಸಲಾಗಿದೆ. ರಾಜ್ಬೀರ್‌ ಅವರನ್ನು ರೇವಾರಿ ರೈಲ್ವೆ ನಿಲ್ದಾಣದ ಅಸಿಸ್ಟೆಂಟ್‌ ಸಬ್‌ ಇನ್ಸ್‌ ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಬೀರ್‌ ಪತ್ನಿ ಆರತಿ, ಪುತ್ರ ಅನು ಅಲಿಯಾಸ್‌ ಯಶ್‌ ಜೊತೆ ಗುರುಗ್ರಾಮ್‌ ನ ಶಿಕೋಹ್‌ ಪುರ್‌ ಗ್ರಾಮದಲ್ಲಿ ವಾಸವಾಗಿದ್ದರು.

ಗುರುವಾರ ರಾಜ್ಬೀರ್‌ ಮತ್ತು ಪತ್ನಿ ಆರತಿ ನಡುವೆ ಜಗಳ ನಡೆದು ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ರಾಜ್ಬೀರ್‌ ಪತ್ನಿಗೆ ಗುಂಡು ಹಾರಿಸಿದ್ದು, ಪತ್ನಿ ಗಾಯಗೊಂಡಿದ್ದಳು. ಇದರಿಂದ ಆಕ್ರೋಶಗೊಂಡ ಪತ್ನಿ, ಪತಿಯ ಸೊಂಟದಲ್ಲಿದ್ದ ಪಿಸ್ತೂಲ್‌ ಅನ್ನು ಕಿತ್ತುಕೊಂಡು ಮೂರು ಬಾರಿ ರಾಜ್ಬೀರ್‌ ಗೆ ಗುಂಡು ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಘಟನೆಗೆ ಸಂಬಂಧಪಟ್ಟಂತೆ ಪತ್ನಿ ಮತ್ತು ಮಗನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next