Advertisement

Saligrama ಗುರುನರಸಿಂಹ ದೇಗುಲದ ಅನ್ನದಾನ ನಿಧಿಗೆ 1 ಕೋ.ರೂ. ನೆರವು

11:40 PM Aug 11, 2024 | Team Udayavani |

ಕೋಟ: ಬೆಂಗಳೂರಿನ ಹೊಟೇಲ್‌ ಇಂದ್ರಪ್ರಸ್ಥದ ಮಾಲಕ ಹರ್ತಟ್ಟು ಪ್ರಕಾಶ ಮಯ್ಯ ಮತ್ತು ಮಂಜುಳಾ ದಂಪತಿ ಯಮುನಾ ಮತ್ತು ಚಂದ್ರಶೇಖರ ಮಯ್ಯ ಸ್ಮರಣಾರ್ಥವಾಗಿ ಸಾಲಿಗ್ರಾಮ ಗುರುನರಸಿಂಹ ದೇಗುಲದ ಶಾಶ್ವತ ಭೋಜನ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದರ ನೆನಪಿಗಾಗಿ ಶಾಶ್ವತ ಫಲಕವನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು.

Advertisement

ಶಾಶ್ವತ ಫಲಕ ಅನಾವರಣಗೊಳಿಸಿ ಮಾತನಾಡಿದ ಪ್ರಕಾಶ ಮಯ್ಯ, ಈ ದೇವಸ್ಥಾನದಲ್ಲಿ ದಿನಂಪ್ರತಿ ನಡೆಯುತ್ತಿರುವ ಅನ್ನ ದಾಸೋಹವು ಶುಚಿ, ರುಚಿ ಮತ್ತು ಸಮಯ ಕ್ಲಪ್ತತೆಗೆ ಹೆಸರುವಾಸಿಯಾಗಿದೆ. ದೈವ ಪ್ರೇರಣೆಯಂತೆ ಭೋಜನ ನಿಧಿಗೆ ದೇಣಿಗೆ ನೀಡಿರುವುದಾಗಿ ತಿಳಿಸಿದರು.

ದಾನಿಗಳನ್ನು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ| ಕೆ.ಎಸ್‌.ಕಾರಂತರು ಕ್ಷೇತ್ರದ ವತಿಯಿಂದಗೌರವಿಸಿದರು.

ದೇಗುಲದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ,ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯಮಾಜಿ ಕೋಶಾಧಿಕಾರಿ ಕಾರ್ಕಡತಾರಾನಾಥ ಹೊಳ್ಳ ಮೊದಲಾದವರಿದ್ದರು.ದೇಗುಲದ ಸಿಬಂದಿ ಗಣೇಶ್‌ ಭಟ್‌ ಕಾರ್ಯಕ್ರಮ ನಿರೂಪಿಸಿ, ಸಿಬಂದಿ ಶ್ರೀಕಾಂತ ಕಲ್ಕೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next