Advertisement

ಗುರುವಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ: ಶ್ರೀ ರಮಾನಂದ ಗುರೂಜೀ

03:55 AM Jul 11, 2017 | Team Udayavani |

ಉಡುಪಿ: ಗುರುವಾದ ವರು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ಮಾತ್ರ ಕಾರ್ಯವೆಸಗದೆ ಸಾಮಾಜಿಕವಾಗಿ ಮಾನವ ಧರ್ಮದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿದಾಗ ಶಾಂತಿಯುತವಾದ ಸದೃಢ ಸಮಾಜ ನಿರ್ಮಾಣವಾಗಲಿದೆ. ಶಾಂತಿ, ಸೌಹಾರ್ದಕಾಪಾಡಿಕೊಂಡು ಬರುವಲ್ಲಿ “ಗುರು’ ಜಾತಿ-ಮತದ ಚೌಕಟ್ಟಿಗೆ ಸಿಲುಕದೆ, ಸ್ವಾರ್ಥರಹಿತ ಮಾರ್ಗದರ್ಶಕ ರಾಗ ಬೇಕು ಎಂದು ಉಡುಪಿ ದೊಡ್ಡಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಹೇಳಿದರು.

Advertisement

ಉಡುಪಿ ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ರವಿವಾರ ಗುರುಪೂರ್ಣಿಮೆ ಅಂಗವಾಗಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಗುರುವಿನ ಮಾರ್ಗದರ್ಶನ ಮುಖ್ಯ
ಸರ್ವರಿಗೂ ಜೀವನದಲ್ಲಿ ಗೆಲ್ಲಬೇಕೆಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಆದರೆ ಬಯಸಿದಂತೆ ಎಲ್ಲವೂ ನಡೆಯದೇ ಹೋದಾಗ ದುಃಖವಾಗುವುದು ಸಹಜ. ಹಾಗಾದರೆ ನಾವೆಲ್ಲಿ ತಪ್ಪಿದ್ದೇವೆ? ಎಂದು ಅವಲೋಕಿಸಿ ಸುಗಮ ಹಾದಿಯನ್ನು ಸೃಷ್ಟಿಸಿಕೊಂಡು ದಿಟ್ಟ ಗುರಿಯೊಂದಿಗೆ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅತೀ ಮುಖ್ಯ. ಈ ನೆಲೆಯಲ್ಲಿ ಗುರುವಿನಲ್ಲಿ ಸಂಪೂರ್ಣಭರವಸೆಯಿಟ್ಟು ಅವರ ಆಂತರ್ಯಶಕ್ತಿ ಯನ್ನು ಗೌರವಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಗುರೂಜೀ ತಿಳಿಸಿದರು.

ಸೌಹಾರ್ದ ಕೋ-ಆಪ್‌. ಸೊಸೈಟಿ ನಿರ್ದೇಶಕಿ ಮೀನಾ ದೇವೇಂದ್ರ ಅವರು ಮಾತನಾಡಿ, ಶ್ರೀ ದುರ್ಗಾ ಆದಿಶಕ್ತಿಯಿಂದ ಅನುಗ್ರಹಿತರಾದ, “ಮಾತನಾಡುವ ಶಕ್ತಿ ಎನಿಸಿದ’ ಶ್ರೀ ರಮಾನಂದ ಗುರೂಜೀ ಅವರ ಆಶೀರ್ವಾದ ನಂಬಿದ ಎಲ್ಲರಿಗೂ ಶ್ರೀರಕ್ಷೆಯಾಗಲಿದೆ ಎಂದರು. ಇದೇ ಸಂದರ್ಭ ಭಕ್ತರು ಗುರೂಜೀ ಅವರಿಗೆ ಗುರುವಂದನೆ ಸಲ್ಲಿಸಿದರು.

ಮಣಿಪಾಲದ ಐಟಿಐ ಕಾಲೇಜಿನ ಪ್ರಾಂಶುಪಾಲ ಗಣಪತಿ, ದೊಡ್ಡಣ ಗುಡ್ಡೆಯ ಪ್ರಜ್ಞಾ ಇಂಟರ್‌ನ್ಯಾಶನಲ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶು ಪಾಲೆ ಉಷಾ ರಮಾನಂದ, ಶಿಕ್ಷಕ ರಾಘವೇಂದ್ರ, ಕಲಾನಿಧಿ ತಂಡದ ವ್ಯವಸ್ಥಾಪಕಿ ಉಪ್ಪೂರು ಭಾಗ್ಯಲಕ್ಷ್ಮೀ, ಚಿತ್ರಾಕ್ಷಿ ಭಾಸ್ಕರ್‌, ಜೆಎಂಟಿ ಟ್ರಾವೆಲ್ಸ್‌ನಆನಂದ ಬಾಯರಿ, ಚರಣ್‌ರಾಜ್‌, ಮಂಗಳೂರಿನ ನಿರ್ಮಲಾ ಸುರೇಶ್‌, ಶ್ರೀ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ಉಪಸ್ಥಿತರಿದ್ದರು.

Advertisement

ಗುರುಪೂರ್ಣಿಮಾ ಪ್ರಯುಕ್ತ ಮನ್ಯುನಾಮಕ ಶ್ರೀ ಲಕ್ಷ್ಮೀನರಸಿಂಹ ಯಾಗ, ನವಗ್ರಹ ಶಾಂತಿ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next