Advertisement

Gurdwara: ಪ್ರಸಾದ ತಯಾರಿಸಿ, ಭಕ್ತರಿಗೆ ಬಡಿಸಿದ ಪಿಎಂ ಮೋದಿ

01:12 AM May 14, 2024 | Team Udayavani |

ಪಟ್ನಾ: ಚುನಾವಣ ಪ್ರಚಾರದ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಬಿಹಾರದ ತಖ್‌¤ ಶ್ರೀ ಹರಿಮಂದಿರ್‌ ಜೀ ಪಟ್ನಾ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದರು. ಕೇಸರಿ ಬಣ್ಣದ ಟರ್ಬನ್‌ ಧರಿಸಿ ಗುರುದ್ವಾರಕ್ಕೆ ತೆರಳಿದ ಅವರು ದರ್ಬಾರ್‌ ಸಾಹಿಬ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ, ಭಕ್ತರಿಗೆ ತಾವೇ ಸ್ವತಃ ಲಂಗಾರ್‌(ಪ್ರಸಾದ) ಬಡಿಸಿದರು. ಪಟ್ನಾ ಸಾಹಿಬ್‌ ಲೋಕಸಭಾ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿರುವ ಕೇಂದ್ರದ ಮಾಜಿ ಸಚಿವ ರವಿಶಂಕರ್‌ ಪ್ರಸಾದ್‌ ಕೂಡ ಮೋದಿಗೆ ಸಾಥ್‌ ನೀಡಿದರು. ಗುರುದ್ವಾರದಲ್ಲಿ ಸ್ವತಃ ಮೋದಿಯವರೇ ಪ್ರಸಾದ ತಯಾರಿಸಿ, ಎಲ್ಲರಿಗೂ ಲಂಗಾರ್‌ ಬಡಿಸಿದ್ದಾಗಿ ಮಾಜಿ ಸಚಿವ ಪ್ರಸಾದ್‌ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next