Advertisement

ಗಂಟುಮೂಟೆ ನೋಡಿದ ನಿರ್ದೇಶಕರು ಏನೆಂದರು ಗೊತ್ತೆ?

11:14 AM Oct 17, 2019 | Team Udayavani |

ರೂಪಾ ರಾವ್ ನಿರ್ದೇಶನದ ಚೊಚ್ಚಲ ಚಿತ್ರ ಗಂಟುಮೂಟೆ ಬಿಡುಗಡೆಗೆ ತಯಾರಾಗಿದೆ. ಈ ವಾರ ಗಂಟುಮೂಟೆ ಎಲ್ಲರೆದುರು ತೆರೆದುಕೊಳ್ಳಲಿದೆ. ಕೆಲವೊಮ್ಮೆ ಕನ್ನಡ ಚಿತ್ರರಂಗದಲ್ಲಿ ಯಾವ ಸ್ಟಾರ್ ಕೂಡಾ ಇಲ್ಲದ ಹೊಸಬರ ಚಿತ್ರಗಳೂ ಕೂಡಾ ಮರ‍್ಯಾಕಲ್ ಸೃಷ್ಟಿಸಿ ಬಿಡುತ್ತವೆ. ತನ್ನ ಕಂಟೆಂಟಿನ ಕಾರಣದಿಂದಲೇ ಹವಾ ಶುರುವಿಟ್ಟುಕೊಳ್ಳೋ ಹೊಸಬರ ಚಿತ್ರಗಳೂ ಗೆದ್ದು ಬೀಗುವ ಅಚ್ಚರಿಗಳೂ ಆಗಾಗ ಸಂಭವಿಸುತ್ತವೆ. ಗಂಟುಮೂಟೆ ಚಿತ್ರವೂ ಕೂಡಾ ಅಂಥಾದ್ದೊಂದು ಗೆಲುವು ದಾಖಲಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

Advertisement

ಈ ಚಿತ್ರಕ್ಕೆ ಈಗಾಗಲೇ ಸಿಕ್ಕಿರೋ ಪ್ರಚಾರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅದು ಹೆಸರು ಮಾಡಿರೋ ರೀತಿಗಳೇ ಮೇಲ್ಕಂಡ ಮಾತುಗಳಿಗೆ ತಾಜಾ ಉದಾಹರಣೆಯಂತಿವೆ. ಈಗಾಗಲೇ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿಯೂ ಈ ಚಿತ್ರ ಪ್ರದರ್ಶನ ಕಂಡಿದೆ. ಕೆಲ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಈಗಾಗಲೇ ಅನೇಕ ಗಣ್ಯರಿಗಾಗಿ ಇದರ ವಿಶೇಷ ಪ್ರದರ್ಶನಗಳೂ ನಡೆದಿವೆ. ಅದರಲ್ಲಿ ಗಂಟುಮೂಟೆಯ ಅಸಲೀ ಹೂರಣ ಕಂಡ ಕನ್ನಡದ ಖ್ಯಾತ ನಿರ್ದೇಶಕರೇ ಭೇಷ್ ಅಂದಿದ್ದಾರೆ. ಈ ಚಿತ್ರ ವಿಶಿಷ್ಟವಾದ ಹೂರಣ ಹೊಂದಿದೆ ಅನ್ನೋದಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ.

ಈ ಸಿನಿಮಾವನ್ನು ನೋಡಿದ ಕನ್ನಡದ ಖ್ಯಾತ ನಿರ್ದೇಶಕರೊಬ್ಬರು ಖುಷಿಗೊಂಡಿದ್ದಾರೆ. ಇಂಥಾ ಕಥೆ ಮತ್ತು ನಿರೂಪಣೆಯ ಚಿತ್ರವನ್ನು ಈ ಹಿಂದೆ ಎಂದೂ ನೋಡಿಲ್ಲವೆಂಬಂಥಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ಈ ಸಿನಿಮಾ ಹಿಟ್ ಆಗೇ ಆಗುತ್ತದೆ ಎಂಬ ಭವಿಷ್ಯವನ್ನೂ ನುಡಿದಿದ್ದಾರೆ. ಈ ಮೂಲಕ ಬಿಡುಗಡೆ ಪೂರ್ವದಲ್ಲಿಯೇ ನಿರ್ದೇಶಕಿ ರೂಪಾ ರಾವ್ ಅವರಿಗೆ ಇನ್ನಷ್ಟು ಸ್ಥೈರ್ಯ ಮೀಡಿಕೊಂಡಂತಾಗಿದೆ. ಇಷ್ಟೆಲ್ಲ ಸಕಾರಾತ್ಮಕ ವಾತಾವರಣದ ಹಿಮ್ಮೇಳದಲ್ಲಿ ಗಂಟುಮೂಟೆ ಈ ವಾರವೇ ಎಲ್ಲರೆದುರು ತೆರೆದುಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next