Advertisement

Gujarat; ದಲಿತ ಮಹಿಳಾಧಿಕಾರಿ ಕುರ್ಚಿ ಎಳೆದು ಬೀಳಿಸಿದ ಕೈ ನಾಯಕನ ಬಂಧನ

12:57 AM Aug 04, 2024 | Team Udayavani |

ಗಾಂಧೀನಗರ: ಗುಜರಾತ್‌ ರಾಜ್ಯ ಗುಪ್ತಚರ ಇಲಾಖೆಯ (ಐಬಿ)ಮಹಿಳಾ ಅಧಿಕಾರಿ ರೀನಾ ಚೌಹಾಣ್‌ ಅವರು ಕುಳಿತಿದ್ದ ಕುರ್ಚಿ ಎಳೆದು ಬೀಳಿಸಿದ್ದ ಕಾಂಗ್ರೆಸ್‌ ನಾಯಕ ಹರೇಶ್‌ ಅಧೀರ್‌ ಅವರನ್ನು ಬಂಧಿಸಲಾಗಿದೆ.

Advertisement

ಘಟನೆ ಬೆನ್ನಲ್ಲೇ ಅಧೀರ್‌ ವಿರುದ್ಧ ಕೇಸು ದಾಖಲಿಸಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ರೀನಾ ಕುರ್ಚಿಯಿಂದ ಮೇಲೆ ಎದ್ದಿದ್ದರು. ಆಕೆ ಮತ್ತೆ ಕೂರುವಾಗ ಅಧೀರ್‌ ಕುರ್ಚಿ ಎಳೆದಿದ್ದಾರೆ. ಇದರಿಂದ ಆಕೆ ಬಿದ್ದು ಗಾಯಗೊಂಡಿದ್ದಾರೆ. ದಲಿತ ಅಧಿಕಾರಿ ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅಹಿರ್ ಕಾಂಗ್ರೆಸ್ ಕಿಸಾನ್ ಸೆಲ್‌ನ ಸಂಯೋಜಕರಾಗಿದ್ದು, ಭುಜ್‌ನ ಸರ್ಕ್ಯೂಟ್ ಹೌಸ್‌ನಲ್ಲಿ ಮೇವಾನಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ರೀನಾ ಚೌಹಾಣ್ ತನ್ನ ಕೆಲಸದ ಭಾಗವಾಗಿ ಅಲ್ಲಿ ಹಾಜರಾಗಿದ್ದರು.

ಎಕ್ಸ್ ಪೋಸ್ಟ್‌ನಲ್ಲಿ, ಗೃಹ ಖಾತೆಯ ರಾಜ್ಯ ಸಚಿವ ಹರ್ಷ ಸಂಘವಿ ಅವರು ಘಟನೆಯನ್ನು ಖಂಡಿಸಿದ್ದು, ಕಾಂಗ್ರೆಸ್ ಮಹಿಳಾ ಮತ್ತು ದಲಿತ ವಿರೋಧಿ ಎಂದು ಹೇಳಿದ್ದಾರೆ. ಮೇವಾನಿ ಅವರು ಅಹಿರ್ ಚೌಹಾಣ್ ಅವರನ್ನು ಬಿಜೆಪಿ ಸರ್ಕಾರದ ಆದೇಶದ ಮೇರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next