Advertisement

ರಾಹುಲ್‌ ದೇವಳ ಭೇಟಿ ಹಿಂದುತ್ವದ ವಿಜಯ: ಶಿವಸೇನೆ ಟಾಂಗ್‌

03:54 PM Dec 06, 2017 | Team Udayavani |

ಮುಂಬಯಿ  : ಗುಜರಾತ್‌ ವಿಧಾನಸಭಾ ಚುನಾವಣಾ ಅಭಿಯಾನವು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ನಾಯಕನನ್ನಾಗಿ ರೂಪಾಂತರಿಸಿದೆ. ಈ ಅಭಿಯಾನದ ವೇಳೆ ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವುದು ಹಿಂದುತ್ವದ ವಿಜಯವಾಗಿದೆ ಮತ್ತು ಬಿಜೆಪಿ ಈ ಬೆಳವಣಿಗೆಯನ್ನು ಸ್ವಾಗತಿಸಬೇಕು ಎಂದು ಶಿವಸೇನೆ ಹೇಳಿದೆ.

Advertisement

ಎರಡು ಹಂತಗಳಲ್ಲಿ ನಡೆಯಲಿರುವ ಗುಜರಾತ್‌ ಚುನಾವಣೆಯ ಮೊದಲ ಹಂತದ ಮತದಾನವು ಇದೇ ಶನಿವಾರ ನಡೆಯಲಿದೆ. 

ಬಿಜೆಪಿಗೆ ಖಚಿತ ಜಯವೆಂದು ವರ್ಣಿಸಲ್ಪಟ್ಟಿರುವ ಗುಜರಾತ್‌ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೀವ್ರ ಆಯಾಸವನ್ನು ತಂದಿದೆಯಾದರೆ ರಾಹುಲ್‌ ಗಾಂಧಿಯನ್ನು ನಾಯಕನನ್ನಾಗಿ ರೂಪಾಂತರಿಸಿದೆ ಎಂದು ಶಿವಸೇನೆ, ಬಿಜೆಪಿಗೆ ಟಾಂಗ್‌ ಕೊಡುವ ರೀತಿಯಲ್ಲಿ, ತನ್ನ ಮುಖವಾಣಿ ಸಾಮ್‌ನಾದಲ್ಲಿ ಸಂಪಾದಕೀಯ ಬರೆದಿದೆ.  

Advertisement

Udayavani is now on Telegram. Click here to join our channel and stay updated with the latest news.

Next