Advertisement

ಗುಜರಾತ್‌: ಹಾರ್ದಿಕ್‌, ಜಿಗ್ನೇಶ್‌ಗೆ ಕಾಂಗ್ರೆಸ್‌ ಆಹ್ವಾನ

07:25 AM Oct 22, 2017 | Team Udayavani |

ಗಾಂಧಿನಗರ/ಹೊಸದಿಲ್ಲಿ: ಇನ್ನೇನು ಕೆಲವೇ ದಿನಗಳಲ್ಲಿ ಗುಜರಾತ್‌ ವಿಧಾನ ಸಭೆಗೆ ಚುನಾವಣಾ ದಿನಾಂಕವೂ ಘೋಷಣೆಯಾಗಲಿದೆ. ಅದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ನೇತ್ವದ ಬಿಜೆಪಿ ವಿರುದ್ಧ ಬಲಿಷ್ಠ ರಾಜಕೀಯ ಮೈತ್ರಿಕೂಟ ರಚಿಸಲು ಕಾಂಗ್ರೆಸ್‌ ಮುಂದಾಗಿದೆ. ಅದಕ್ಕಾಗಿ ಪಟೇಲರಿಗೆ ಮೀಸಲು ನೀಡುವ ವಿಚಾರದಲ್ಲಿ ಹೋರಾಟ ನಡೆಸಿದ ಹಾರ್ದಿಕ್‌ ಪಟೇಲ್‌ ಮತ್ತು ದಲಿತ ನಾಯಕ ಜಿಗ್ನೇಶ್‌ ಮೇವಾನಿ, ಪ್ರಭಾವಿ ನಾಯಕ ಅಲ್ಪೇಶ್‌ ಠಾಕೂರ್‌ತ್ತ ದೃಷ್ಟಿ ಹಾಯಿಸಿದೆ.

Advertisement

ಅದರ ಮೊದಲ ಭಾಗವಾಗಿ ಪಾಟೀದಾರ್‌ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಹಾರ್ದಿಕ್‌ ಪಟೇಲ್‌ರನ್ನು ಪಕ್ಷಕ್ಕೆ ಆಹ್ವಾನಿಸಿದೆ. ಅಲ್ಲದೆ ಠಾಕೂರ್‌ ಸಮುದಾಯದ ನಾಯಕ ಅಲ್ಪೇಶ್‌ ಠಾಕೂರ್‌ ಮತ್ತು ದಲಿತ ನಾಯಕ ಜಿಗ್ನೇಶ್‌ ಮೇವಾನಿಯನ್ನು ಪಕ್ಷ ಸೇರುವಂತೆ ಆಹ್ವಾನಿಸಿದೆ. ಈ ಮಧ್ಯೆಯೇ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಜತೆಗೆ ಚುನಾವಣಾ ಪೂರ್ವ ಮೈತ್ರಿ ಸಾಧ್ಯತೆಯನ್ನೂ ಹುಟ್ಟುಹಾಕಿದೆ. ಏಕೈಕ ಜೆಡಿಯು ಶಾಸಕ ಛೋಟು ವಾಸವ ಕಾಂಗ್ರೆಸ್‌ ಸೇರುವ ನಿರೀಕ್ಷೆಯೂ ಇದೆ. ಈ ನಡುವೆ ಅಹಮ ದಾಬಾದ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅಲ್ಪೇಶ್‌ ಠಾಕೂರ್‌ ತಾವು ಅ.23ರಂದು ಕಾಂಗ್ರೆಸ್‌ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

ಇದೇ ವೇಳೆ, ಕಾಂಗ್ರೆಸ್‌ನ ಆಹ್ವಾನದ ಬಗ್ಗೆ ಮಾತನಾಡಿದ ಹಾರ್ದಿಕ್‌ ಪಟೇಲ್‌, ಈ ಬಾರಿಯ ಚುನಾವಣೆ ಕೇವಲ ಎರಡು ಪಕ್ಷಗಳ ಹೋರಾಟವಾಗಿರುವುದಿಲ್ಲ. ಆದರೆ ನಾವು ಬಿಜೆಪಿ ವಿರುದ್ಧ ಒಂದಾಗಬೇಕಿದೆ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next