Advertisement

ಗುಜರಾತ್‌ನಲ್ಲಿ ಸೇನಾ ಶಾಲೆ

01:52 AM Aug 16, 2019 | Team Udayavani |

ಗಾಂಧಿನಗರ: ಬುಡಕಟ್ಟು ಪ್ರದೇಶಗಳಲ್ಲಿ ಗುಜರಾತ್‌ ಸರ್ಕಾರವು ಸೇನಾ ಶಾಲೆಯನ್ನು ತೆರೆದು, ಅಲ್ಲಿನ ಯುವಕರಿಗೆ ಸೂಕ್ತ ತರಬೇತಿ ನೀಡಲು ನಿರ್ಧರಿಸಿದೆ. ಇದರಿಂದ ಯುವಕರು ಸೇನೆಗೆ ಆಯ್ಕೆಯಾಗಲು ಹೆಚ್ಚು ಸಮರ್ಥರಾಗುತ್ತಾರೆ ಎಂದು ಸಿಎಂ ವಿಜಯ್‌ ರುಪಾಣಿ ಹೇಳಿದ್ದಾರೆ.

Advertisement

ಬುಡಕಟ್ಟು ಜನಾಂಗದ ಯುವಕರು ಸಹಜವಾಗಿ ಸದೃಢವಾಗಿರುತ್ತಾರೆ. ಅವರು ಯೋಧರಾಗಲು ಸೂಕ್ತ ದಾಡ್ಯರ್ತೆ ಹೊಂದಿರುತ್ತಾರೆ. ಸೇನೆಯ ಅಗತ್ಯಕ್ಕೆ ಹೊಂದುವಂತೆ ಇವರು ಇರುತ್ತಾರೆ. ಹೀಗಾಗಿ ಈ ಭಾಗದಲ್ಲಿ ಸೇನಾ ಶಾಲೆಗಳನ್ನು ಸ್ಥಾಪಿಸಲಿದ್ದೇವೆ. ಇದರಿಂದ ಬುಡಕಟ್ಟು ಯುವಕರು ಸೇನೆಗೆ ಸೇರಲು ಹೆಚ್ಚು ಅರ್ಹರಾಗುತ್ತಾರೆ ಎಂದು ಅವರು ಛೋಟಾ ಉದಯ್‌ಪುರದ ಬುಡಕಟ್ಟು ಪ್ರದೇಶದಲ್ಲಿ ಹೇಳಿದ್ದಾರೆ. ಈಗಾಗಲೇ ಬುಡಕಟ್ಟು ಜನರು ಹೆಚ್ಚಿರುವ ದಾಹೋದ್‌, ತಾಪಿ, ವಲ್ಸದ್‌ನಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಬುಡಕಟ್ಟು ಜನರು ಉನ್ನತ ಮತ್ತು ತಾಂತ್ರಿಕ ಶಿಕ್ಷಣವನ್ನು ಪಡೆಯಲು ಸೂಕ್ತ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next