Advertisement

ಗುಜರಾತ್ CM ಅಭ್ಯರ್ಥಿ ಇಸುದನ್ …150 ಕೋಟಿ ರೂ. ಹಗರಣ ಬಯಲಿಗೆಳೆದಿದ್ದ ಮಾಜಿ ಪತ್ರಕರ್ತ

04:23 PM Nov 04, 2022 | Team Udayavani |

ಗಾಂಧಿನಗರ(ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಇಸುದನ್ ಗಢ್ವಿ ಅವರನ್ನು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಇಸುದಾನ್ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ. 2021ರಲ್ಲಿ ಇಸುದನ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

Advertisement

ರೈತನ ಮಗ ಇಸುದನ್:

1992ರ ಜನವರಿ 10ರಂದು ಗುಜರಾತ್ ನ ದೇವಭೂಮಿ ದ್ವಾರಕ ಜಿಲ್ಲೆಯ ಜಮ್ಖಾಂಭಲಿಯಾ ನಗರ ಸಮೀಪದ ಪಿಪಾಲಿಯಾ ಗ್ರಾಮದಲ್ಲಿ ಇಸುದನ್ ಜನಿಸಿದ್ದರು. ಇವರ ತಂದೆ ಖೇರಾಜ್ ಭಾಯ್ ಗಢ್ವಿ ರೈತರಾಗಿದ್ದಾರೆ.

ಇದನ್ನೂ ಓದಿ:ಗೋವಾದ ಯುವಕರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ : ಸಿಎಂ ಸಾವಂತ್

150 ಕೋಟಿ ರೂ. ಮೌಲ್ಯದ ಅಕ್ರಮ ಬಯಲಿಗೆಳೆದಿದ್ದ ಮಾಜಿ ಪತ್ರಕರ್ತ:

Advertisement

ಇಸುದನ್ ಗಢ್ವಿ ಈ ಮೊದಲು ಟಿವಿಯಲ್ಲಿ ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ್ದರು. ವಿಟಿವಿ ನ್ಯೂಸ್ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.  ವಿಟಿವಿ ಗುಜರಾತಿಯ ಮಹಾಮಂಥನ್ ಎಂಬ ಕಾರ್ಯಕ್ರಮದ ನಿರೂಪಕರಾಗಿ ಇಸುದನ್ ಜನಪ್ರಿಯರಾಗಿದ್ದರು. ಇದೀಗ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ್ದ ಗಢ್ವಿ ಅವರು ದೂರದರ್ಶನದ ಜನಪ್ರಿಯ “ಯೋಜನಾ” ಎಂಬ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಹೆಸರು ಪಡೆದಿದ್ದರು. 2007ರಿಂದ 2011ರವರೆಗೆ ಈಟಿವಿ ಗುಜರಾತಿ ನ್ಯೂಸ್ ಚಾನೆಲ್ ನಲ್ಲಿ ಪೋರಬಂದರ್ ನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.

ನಂತರ ಈ ಶೋ ಮೂಲಕ ಗಢ್ವಿ ಅವರು ಗುಜರಾತ್ ನ ಡಾಂಗ್ ಮತ್ತು ಕಪರಾಡಾ ತಾಲೂಕುಗಳಲ್ಲಿನ ಸುಮಾರು 150 ಕೋಟಿ ರೂಪಾಯಿ ಮೊತ್ತದ ಅಕ್ರಮ ಅರಣ್ಯ ನಾಶದ ಹಗರಣವನ್ನು ಬಯಲಿಗೆಳೆದಿದ್ದರು. ಅಷ್ಟೇ ಅಲ್ಲ ಅಂದು ಆರೋಪಿಗಳ ವಿರುದ್ಧ ಗುಜರಾತ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು. ಈ ಘಟನೆಯ ಬಳಿಕ ಗಢ್ವಿಗೆ ಇನ್ನಷ್ಟು ಹೆಸರು ಬಂದಿದ್ದು, ಜೊತೆ ನಿರ್ಭೀತ ಪತ್ರಕರ್ತ ಎಂಬ ಹಣೆಪಟ್ಟಿಯನ್ನೂ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next