Advertisement

Gudibande; ಟಿಪ್ಪರ್‌ ಡಿಕ್ಕಿ: ಕೆರೆ ಕಟ್ಟೆಗೆ ಹಾನಿ

07:42 PM Jan 06, 2024 | Team Udayavani |

ಗುಡಿಬಂಡೆ: ಪಟ್ಟಣದ ಅಮಾನಿಭೈರಸಾಗರ ಕೆರೆ ಏರಿಯಾ ಮೇಲೆ ವೇಗವಾಗಿ ಬಂದ ಟಿಪ್ಪರ್‌ ಕಟ್ಟೆಗೆ ಗುದ್ದಿ, ಕಟ್ಟೆ ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ.

Advertisement

ಇತ್ತೀಚೆಗೆ ತಾಲೂಕಿನಲ್ಲಿ ಟಿಪ್ಪರ್‌ಗಳ ಅತಿವೇಗ ದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಟಿಪ್ಪರ್‌ಗಳ ವೇಗಕ್ಕೆ ಪೊಲೀಸರು ಕಡಿವಾಣ ಹಾಕಿದರು ಪ್ರಯೋಜನವಾಗಿಲ್ಲ. ಕೇವಲ ಪ್ರಾಣ ಹಾನಿಗೆ ಕಾರಣವಾಗಿದ್ದ ವೇಗ ಇಂದು ತಾಲೂಕಿನ ಜೀವ ನಾಡಿಯಾದ ಅಮಾನಿಭೈರಸಾಗರ ಕೆರೆಗೆ ಸಹ ಅಪಾಯ ತಂದಿಟ್ಟಿದೆ.

ಪೆರೇಸಂದ್ರ ಕಡೆಯಿಂದ ಬರುತ್ತಿದ್ದ ಟಿಪ್ಪರ್‌ ಅತಿವೇಗವಾಗಿ ಬಂದಿದ್ದರಿಂದ ಕೆರೆಯ ಏರಿಯ ಮೇಲಿನ ತಿರುವುಗಳಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆ ಕಟ್ಟೆಗೆ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಗುಡಿಬಂಡೆ ಪೊಲೀಸ್‌ ಉಪನಿರೀಕ್ಷಕರಾದ ನಾಗರಾಜ್, ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಟಿಪ್ಪರ್‌ ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next