Advertisement

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

04:41 PM Oct 21, 2024 | Team Udayavani |

ಗುಡಿಬಂಡೆ: ಪಟ್ಟಣದ ಕುಂಬಾರಪೇಟೆಯ ಗೌಸ್ ಪೀರ್ ಎಂಬುವವರ ಮನೆಯ ಬೀಗ ಮುರಿದ ಕಳ್ಳರು, ಮನೆ ದೋಚಿ, ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಬೀರು, ಮಂಚ, ಟಿವಿ ಇತರೆ ವಸ್ತುಗಳಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ.

Advertisement

ಪಟ್ಟಣದ ಎಂಟನೇ ವಾರ್ಡ್‌ನ ಕುಂಬಾರಪೇಟೆಯ ವಾಸಿಯಾದ ಗೌಸ್ ಪೀರ್ ಎಂಬುವವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ರಾತ್ರೋ ರಾತ್ರಿ ಕಳ್ಳರು, ಮನೆಯ ಬೀಗ ಕಿತ್ತು ಹಾಕಿ, ಬೀರುವಿನ ಬೀಗ ಮುರಿದು, ಬೀರುವಿನಲ್ಲಿದ್ದ 15 ಸಾವಿರ ನಗದು, 35 ಸಾವಿರ ಬೆಲೆಯ ಚಿನ್ನಾಭರಣವನ್ನು ಕಳುವು ಮಾಡಿದ್ದು, ಬೀರು, ಮಂಚ, ಟಿ.ವಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ.

ಇತ್ತೀಚೆಗೆ ಪಟ್ಟಣದ ಉಡುಪಿ ಹೋಟೆಲ್‌ನ ಮಾಲೀಕರ ಮನೆಯ ಮೇಲ್ಭಾಗದ ಎರಡು ರೂಂ ಗಳ ಬೀಗ ಮುರಿದು ಕಳುವು ಯತ್ನಕ್ಕೆ ಪ್ರಯತ್ನ ಪಟ್ಟು, ಏನೂ ಸಿಗದ ಕಾರಣ ಬೆಂಕಿ ಇಟ್ಟು ಮಂಚ ಸೇರಿದಂತೆ ಇತರೆ ವಸ್ತುಗಳಿಗೆ ಬೆಂಕಿ ಇಟ್ಟಿದ್ದರು.

ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಠಾಣಾ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Kavoor: ಒಳಚರಂಡಿಯಿಂದ ಹೊರಚಿಮ್ಮುವ ಮಲಿನ ನೀರು; ಸಾಂಕ್ರಾಮಿಕ ರೋಗ ಭೀತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next