Advertisement

ನೀರಿನಲ್ಲಿ ಸಿಲುಕಿಕೊಂಡಿದ್ದ ಆಂಬ್ಯುಲೆನ್ಸ್ ತಳ್ಳಿ ಮಾನವೀಯತೆ ಮೆರೆದ ಸಾರ್ವಜನಿಕರು

02:26 PM Oct 24, 2021 | Team Udayavani |

ಗುಡಿಬಂಡೆ: ಪಟ್ಟಣದ ಅಮಾನಿಭೈರಸಾಗರ ಕೆರೆ ತುಂಬಿ ಸುಮಾರು ಎರಡು ಅಡಿ ಎತ್ತರ ಹೋಗುತ್ತಿರುವುದರಿಂದ ಆಂಬ್ಯುಲೆನ್ಸ್ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸ್ಥಳೀಯರ ಸಹಾಯದಿಂದ ಸಂಚರಿಸಿತು.

Advertisement

ತಾಲೂಕಿನಲ್ಲಿ ಎಡಬಿಡದೆ ಬೀಳುತ್ತಿರುವ ಮಳೆಯಿಂದ ಕೆರೆ ತುಂಬಿ ಹರಿಯುತ್ತಿದ್ದು, ತಡ ರಾತ್ರಿ ಯು ಸಹ ಭಾರಿ ಮಳೆ ಬಿದ್ದಿದ್ದರಿಂದ ಕೆರೆ ಏರಿಯಮೇಲೆ ಸುಮಾರು ಎರಡು ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಯಾಗಿದೆ.

ಇದನ್ನೂ ಓದಿ:ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ಈ ಸಮಯದಲ್ಲಿ ಬಂದಂತಹ ಎರ್ಮಜೆನ್ಸಿ ಆಂಬ್ಯುಲೆನ್ಸ್ ಕೆರೆ ದಂಡೆ ಮೇಲೆ ಸಾಗಲು  ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಯಿತು.

ಈ ಸಮಯದಲ್ಲಿ ಮಾನವೀಯತೆ ಮೆರೆದ ಇಲ್ಲಿನ ಸ್ಥಳಿಯರು ಆಂಬ್ಯುಲೆನ್ಸ್ ವಾಹನ ವನ್ನು ತಳ್ಳುವ ಮೂಲಕ  ಕೆರೆ ಕಟ್ಟೆ ದಾಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next