Advertisement

Tyre Blast: ಟ್ರ್ಯಾಕ್ಟರ್ ಮಗುಚಿ ಬಿದ್ದು, ಇಬ್ಬರಿಗೆ ಗಂಭೀರ ಗಾಯ

03:44 PM Jan 10, 2024 | Team Udayavani |

ಗುಡಿಬಂಡೆ: ತಾಲೂಕಿನ ಕಣಿವೆ ಪ್ರದೇಶದಲ್ಲಿ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ನ ಹಿಂಭಾಗದ ಟೈಯರ್ ಬ್ಲಾಸ್ಟ್ ಆಗಿ, ಮಗುಚಿ ಬಿದ್ದು, ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಮೂವರು ಸಣ್ಣಪುಟ್ಟ ಗಾಯಗೊಳೊಂದಿಗೆ ಆಸ್ಪತ್ರೆ ಸೇರಿದ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಗುಡಿಬಂಡೆ ಪಟ್ಟಣದಿಂದ ಗೌರೀಬಿದನೂರಿಗೆ ಹೋಗುವ ಮಧ್ಯೆ ಬರುವ ಕಣಿವೆ ಪ್ರದೇಶದಲ್ಲಿ ಗುಡಿಬಂಡೆ ಕಡೆಯಿಂದ ಆಂದ್ರಪ್ರದೇಶದ ಲೇಪಾಕ್ಷಿ ಮಂಡಲಂಗೆ ಸೇರಿದ ವೆಂಕಟಾಪುರ ಗ್ರಾಮದ ಶಿವಾಚಾರಿ, ತಿಮ್ಮಪ್ಪ, ನಾಗರಾಜು, ರಾಮಪ್ರಸಾದ್, ರಾಘವಚಾರಿ ಎಂಬವರು ಟ್ರಾಕ್ಟರ್‌ನಲ್ಲಿ ಹುಲ್ಲು ತುಂಬಿಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರ್‌ನ ಹಿಂಬದಿಯ ಟೈಯರ್ ಬ್ಲಾಸ್ಟ್ ಆದ ಕಾರಣ ಟ್ರ್ಯಾಕ್ಟರ್ ಮುಗುಚಿ ಬಿದ್ದಿದ್ದು, ಟ್ರ್ಯಾಕ್ಟರ್‌ನಲ್ಲಿದ್ದ ಐದು ಜನರು ಟ್ರ್ಯಾಕ್ಟರ್‌ನ ಕೆಳಗಡೆ ಸಿಲುಕಿಕೊಂಡಿದ್ದಾರೆ.

ವಿಷಯ ತಿಳಿದ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜೆ.ಸಿ.ಬಿ. ಕರೆಸಿ ಟ್ರ್ಯಾಕ್ಟರ್‌ನ ಕೆಳಗಡೆ ಸಿಲುಕಿಕೊಂಡಿದ್ದವರನ್ನು ರಕ್ಷಿಸಿ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು, ಐದು ಜನರ ಪೈಕಿ ಇಬ್ಬರಿಗೆ ಗಂಬೀರ ಗಾಯಗಳಾದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next