ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯಾಗಿದೆ.
Advertisement
ಗಣಮುಖೆ ಸಚಿವರಿದ್ದಾಗ ನಿರ್ಮಾಣವಾದ ಶಾಲೆ: ಅಂದಿನ ಮೈಸೂರು ಸರ್ಕಾರದಲ್ಲಿ ಅಫಜಲಪುರದ ಮಾಜಿ ಶಾಸಕರಾದ ಅಣ್ಣಾರಾವ್ ಗಣಮುಖೆ ಶಿಕ್ಷಣ ಸಚಿವರಾಗಿದ್ದಾಗ ಈ ಶಾಲೆ ನಿರ್ಮಿಸಲಾಗಿದೆ. ಅಂದಿನಿಂದ ಇಲ್ಲಿನ ವರೆಗೆಶಾಲೆಗೆ ಕಾಯಕಲ್ಪವನ್ನು ಯಾವ ಶಾಸಕರು ಕಲ್ಪಿಸಿಲ್ಲ.
ಕುಸಿಯುವ ಹಂತದಲ್ಲಿದೆ ಮೇಲ್ಛಾವಣಿ: ಅತನೂರ ಗ್ರಾಮದ ಗ್ರಾಪಂ ಪಕ್ಕದಲ್ಲಿರುವ 1ರಿಂದ 7ನೇ ತರಗತಿ ವರೆಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಮೇಲ್ಛಾವಣಿ ಕುಸಿಯುವ ಹಂತ ತಲುಪಿದೆ. ಈ ಶಾಲೆ 1960ರಲ್ಲಿ ಆರಂಭವಾದಾಗಿನಿಂದ ಇಲ್ಲಿನ ತನಕ ದುರಸ್ತಿಯನ್ನು ಮಾಡಿಸಿಲ್ಲ. ಹೀಗಾಗಿ ಮೇಲ್ಛಾವಣಿ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ. ಇಂತಹ ಅಪಾಯಕಾರಿ ಶಾಲಾ ಕೊಣೆಗಳಲ್ಲಿ ಮಕ್ಕಳು ಪಾಠ ಕಲಿಯುವಂತೆ ಆಗಿದೆ.
ಗೋಡೆಯನ್ನು ಕಿಡಿಗೇಡಿಗಳು ಒಡೆದಿದ್ದಾರೆ. ಅಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರಿಗಾಗಿ ನಿರ್ಮಿಸಿರುವ ಶೌಚಾಲಯ ಉಪಯೋಗಕ್ಕೆ ಬಾರದಂತಾಗಿದೆ. ಕುಡಿಯುವ ನೀರನ ತೊಂದರೆಯು ಇರುವುದರಿಂದ ಶಾಲೆಯಲ್ಲಿನ ಶೌಚಾಲಯ ಬಳಕೆ
ಮಾಡಲಾಗುತ್ತಿಲ್ಲ.
Related Articles
Advertisement
ಶಾಲೆಯ ಮೇಲ್ಛಾವಣಿ ಬೀಳುವ ಹಂತಕ್ಕೆ ತಲುಪಿದ್ದರಿಂದ ಮೇಲ್ಛಾವಣಿಯ ಭಾವಚಿತ್ರ ತೆಗೆದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಪಂಗೆ ಪತ್ರ ಬರೆದು ಸಮಸ್ಯೆ ತಿಳಿಸಿದ್ದೇನೆ. ಪರಿಶೀಲಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮಹಿಬೂಬ್ ಬಾಗವಾನ್, ಮುಖ್ಯಶಿಕ್ಷಕ ಸ.ಹಿ.ಪ್ರಾ ಉರ್ದು ಶಾಲೆ, ಅತನೂರ ಮಲ್ಲಿಕಾರ್ಜುನ ಹಿರೇಮಠ