Advertisement

Rakshak bullet:ಮೊದಲ ಚಿತ್ರದಲ್ಲೇ ಮಚ್ಚು ಹಿಡಿಯಲಿರುವ ರಕ್ಷಕ್‌ ಬುಲೆಟ್:‌ಪೋಸ್ಟರ್‌ ರಿಲೀಸ್

11:53 AM Apr 03, 2024 | Team Udayavani |

ಬೆಂಗಳೂರು:  ಸ್ಯಾಂಡಲ್‌ವುಡ್‌ನಲ್ಲಿ ತನ್ನ ಹಾಸ್ಯದಿಂದಲೇ ಅಪಾರ ಮಂದಿಯ ಮನೆ – ಮನ ಗೆದ್ದ ಬುಲೆಟ್‌ ಪ್ರಕಾಶ್‌ ಅವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರ ಕಾಮಿಡಿ ಟೈಮಿಂಗ್‌  ಚಂದನವನದಲ್ಲಿ ಅವರನ್ನು ಉತ್ತುಂಗಕ್ಕೇರಿಸಿತ್ತು.

Advertisement

ಇದೀಗ ಬುಲೆಟ್‌ ಪ್ರಕಾಶ್‌ ಅವರ ಮಗ ರಕ್ಷಕ್‌ ಇದೇ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಮೊದಲ ಚಿತ್ರ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ರಕ್ಷಕ್‌ ಅವರ ಪರಿಚಯ ಕನ್ನಡಿಗರಿಗೆ ಮಾಡಿಕೊಡಬೇಕಿಲ್ಲ. ಯಾಕೆಂದರೆ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಫಾಲೋವರ್ಸ್‌ ಗಳನ್ನು ಸೃಷ್ಟಿಸಿರುವ ಅವರು, ದೊಡ್ಡ ದೊಡ್ಡ ಡೈಲಾಗ್ಸ್‌ ಗಳನ್ನು ಹೇಳಿ ತಮಗೆ ತಾವೇ ಹೈಪ್‌ ಕೊಟ್ಟು ಸಾಗಿ ಬಂದಿದ್ದಾರೆ.

ಹತ್ತು‌ ಮಾಸ್ ಡೈಲಾಗ್  ಬಿಟ್ರೆ ಕರ್ನಾಟಕನೇ ನಂದು.. ಹೀಗೆ ಅನೇಕ ಡೈಲಾಗ್ಸ್‌ ಗಳನ್ನು ಹೇಳಿ ಹೈಪ್‌ ಸೃಷ್ಟಿಸಿಕೊಂಡ ರಕ್ಷಕ್‌ ಸಾಮಾಜಿಕ ಜಾಲತಾಣದಲ್ಲಿ ಹತ್ತಾರು ಬಾರಿ ಟ್ರೋಲ್‌ ಗಳಿಗೆ ಆಹಾರವಾಗಿದ್ದಾರೆ.  ಟ್ರೋಲ್‌ ಗಳಿಂದ ಸುದ್ದಿಯಾದ ಅವರಿಗೆ ಅದೇ ಟ್ರೋಲ್‌ ಗಳಿಂದ ಬಿಗ್‌ ಬಾಸ್‌ ಸೀಸನ್‌ 10 ಗೆ ಹೋಗುವ ಅವಕಾಶ ಒದಗಿಬಂತು. ಬಿಗ್‌ ಬಾಸ್‌ ನಲ್ಲೂ ತನ್ನ ವರ್ತನೆಯಿಂದ ಸದ್ದು ಮಾಡಿದ ರಕ್ಷಕ್‌ ಅಲ್ಲಿಂದ ಹೊರಬಂದ ಬಳಿಕವೂ ಬಿಗ್‌ ಬಾಸ್‌ ಬಗ್ಗೆಯೇ ಸಂದರ್ಶನದಲ್ಲಿ ಕೆಲವೊಂದು ಮಾತುಗಳನ್ನಾಡಿ ಟೀಕೆ ಹಾಗೂ ಟ್ರೋಲ್‌ ಗೆ ಒಳಗಾಗಿದ್ದರು.

ಎಷ್ಟೇ ಟ್ರೋಲ್‌ ಮಾಡಿದರೂ, ತಾನು ಇರೋದೆ ಹೀಗೆ ಎನ್ನುವ ರಕ್ಷಕ್‌ ಬುಲೆಟ್‌ ಇದೀಗ ಚೊಚ್ಚಲ ಬಾರಿಗೆ ಸಿನಿರಂಗಕ್ಕೆ ಕಾಲಿಡಲಿದ್ದಾರೆ. ಆ ಮೂಲಕ ತಂದೆಯ ಹಾದಿಯಲ್ಲಿ ಹೆಜ್ಜೆ ಇಡಲಿದ್ದಾರೆ.

Advertisement

ಯಾವ ಸಿನಿಮಾ ಇದು?:  ಬುಲೆಟ್‌ ಪ್ರಕಾಶ್‌ ಅವರ ಹುಟ್ಟುಹಬ್ಬದಂದು(ಏ.2 ರಂದು) ರಕ್ಷಕ್‌ ತಮ್ಮ ಮೊದಲ ಸಿನಿಮಾದ ಪೋಸ್ಟರ್‌ ನ್ನು ರಿಲೀಸ್‌ ಮಾಡಿದ್ದಾರೆ.

“ಎಲ್ಲಾ ‌ನನ್ನ‌ ಆತ್ಮೀಯರೆ , ಇಂದು‌ ನನ್ನ ಪೂಜ್ಯ ತಂದೆ ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ, ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರ ತಂಡಕ್ಕೂ ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ” ಎಂದು ರಕ್ಷಕ್‌ ಬರೆದುಕೊಂಡಿದ್ದಾರೆ.

ಮಚ್ಚು ಅಡ್ಡವಿಟ್ಟು ʼಆರ್‌ ಬಿ 01ʼ ಎಂದು ಬರೆಯಲಾಗಿದೆ. ಟೈಟಲ್‌ – ಟೀಸರ್‌ ಶೀಘ್ರದಲ್ಲೇ ರಿಲೀಸ್‌ ಆಗಲಿದೆ. ಪೋಸ್ಟರ್‌ ಕೆಳಗೆ ”ಮಚ್ಚಾ ಏರಿಯಾನಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದನ್ನೇ”. ”ಬುಲೆಟ್”, ”ಇನ್ಮುಂದೆ ನಂದೆ ರೌಂಡು.. ನಂದೆ ಸೌಂಡು..” ಎನ್ನುವ ಸಾಲುಗಳನ್ನು ಬರೆಯಲಾಗಿದೆ.

ಈ ಸಿನಿಮಾವನ್ನು ಕ್ರಿಶ್‌ ಎನ್ನುವವರು ನಿರ್ದೇಶನ ಮಾಡಲಿದ್ದಾರೆ.  ಶ್ರೀಹರಿ  ಅವರ ಸಂಗೀತ ನಿರ್ದೇಶನ ಇರಲಿದೆ. ಶಿವು ಅವರ ನೃತ್ಯ ನಿರ್ದೇಶನ , ಮಹೇಶ್ ಗಂಗಾವತಿ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ‘ಶ್ರೀಧರ ಕಶ್ಯಪ್’ ಕ್ಯಾಮರಾದಲ್ಲಿ ಸಿನಿಮಾ ಸೆರೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next