Advertisement

ಮತದಾರರಿಂದ ಭರವಸೆ,ಗೆಲುವು ಖಚಿತ: ಅಮೃತ್‌ ಶೆಣೈ

09:01 PM Apr 03, 2019 | sudhir |

ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಅವರ ಪಿಪಿಸಿ ಬಳಿಯಲ್ಲಿರುವ ಸಂಕೀರ್ಣದಲ್ಲಿ ಚುನಾವಣಾ ಕಚೇರಿಯನ್ನು ತೆಂಗಿನ ಸಸಿಗೆ ನೀರೆರೆಯುವ ಮೂಲಕ ಅತಿಥಿಗಳು ಶನಿವಾರ ಉದ್ಘಾಟಿಸಿದರು.

Advertisement

ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಮಾತನಾಡಿ, ಸೋಲು-ಗೆಲುವು ಮುಖ್ಯವಲ್ಲ. ಹೋರಾಟದ ದೃಷ್ಟಿಯಿಂದ ಕಣಕ್ಕಿಳಿದಿದ್ದು ದೂರವಾಣಿ ಕರೆ ಮೂಲಕ ಮತ ನೀಡುವುದಾಗಿ ಸಾವಿರಾರು ಮಂದಿ ಭರವಸೆ ನೀಡಿದ್ದಾರೆ. ನಾನು ಇದುವರೆಗೆ ಮಾಡಿದ ಸಮಾಜಮುಖೀ ಕಾರ್ಯಕ್ಕೆ ಭರವಸೆ ಮಾತುಗಳು ಕೇಳಿ ಬರುತ್ತಿದೆ ಎಂದರು.

ಕ್ಷೇತ್ರದಲ್ಲಿ 2.15 ಲಕ್ಷ ಮನೆಗಳಿಗೆ ಪ್ರತಿ ಮನೆಗೂ ತೆರಳಲು ಸಾಧ್ಯವಿಲ್ಲದ ನೆಲೆಯಲ್ಲಿ ಪತ್ರಿಕಾ ಗೋಷ್ಠಿ, ಪ್ರಚಾರ ಸಭೆ, ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ತಲುಪಿ ಮನವಿ ಮಾಡುತ್ತೇನೆ. ಗೌಪ್ಯ ಮತದಾನವಾದ
ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲುವ ಭರವಸೆ ಇದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಟ್ಟು ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕ್ಷೇತ್ರದ ಯಾವುದೇ ಸಮಸ್ಯೆಗೆ ಸ್ಪಂದಿಸದ ನಿಷ್ಕ್ರಿಯ ಸಂಸದೆ, ಕೇಂದ್ರ ಸರಕಾರದ ನೀತಿಯ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ಕೋಟಿಗಟ್ಟಲೆ ಹಣದ ಆಮಿಷ ಬಂದಿದೆ. ಆದರೂ ಜಗ್ಗದೆ ಚುನಾವಣೆ ಎದುರಿಸುತ್ತೇನೆ ಎಂದರು.

ಸಂಸದನಾಗಿ ಗೆದ್ದ ಬಳಿಕ
ಸಂಸದನಾಗಿ ಗೆದ್ದ ಅನಂತರ ಮರಳಿನ ಸಮಸ್ಯೆಗೆ ಪರಿಹಾರ, ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಫ್ಟ್ವೇರ್‌ ಪಾರ್ಕ್‌ ನಿರ್ಮಿಸಿ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವುದು, ಸುವರ್ಣ ತ್ರಿಭುಜ ಬೋಟ್‌ ಮತ್ತು ಮೀನುಗಾರರ ಪತ್ತೆ ಕಾರ್ಯಕ್ಕೆ ನ್ಯಾಯೋಚಿತ ಹೋರಾಟ, ಚಿಕ್ಕಮಗಳೂರು ಜಿಲ್ಲೆಯ ಅಡಿಕೆ, ಕಾಫಿ ಬೆಳೆಗಾರರ, ಕುದುರೆಮುಖ ಕಾರ್ಮಿಕರ ಸಮಸ್ಯೆಗೆ ಪರಿಹಾರ, ಉಭಯ ಜಿಲ್ಲೆಗಳಲ್ಲಿ ಸಾಮಾಜಿಕ ಸಾಮರಸ್ಯ, ಶಾಂತಿ ಕೆಡಿಸುವ ಶಕ್ತಿಗಳ ವಿರುದ್ಧ ಹೋರಾಟ, ರಾ.ಹೆ., ಟೋಲ್‌ಗೇಟ್‌, ಸಿಆರ್‌ಝಡ್‌ ಮತ್ತು ಕೇಂದ್ರ ವ್ಯಾಪ್ತಿಯ ಇನ್ನಿತರ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಹೋರಾಟ, ಉಭಯ ಜಿಲ್ಲೆಗಳ ಜನಾಭಿಪ್ರಾಯದಂತೆ ಸಂಸತ್ತಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದವರು ಭರವಸೆ ನೀಡಿದರು.

ಮನೋವೈದ್ಯ ಡಾ| ಪಿ.ವಿ. ಭಂಡಾರಿ ಮಾತನಾಡಿ, ಅಮೃತ್‌ ಶೆಣೈ ಅವರಿಗೆ ಕಾಂಗ್ರೆಸ್‌ನಿಂದ ಹೊರಗೆ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪರಿಸ್ಥಿತಿ ಅನಿವಾರ್ಯವಾಗಿ ಒದಗಿ ಬಂದಿದೆ. ಸಭ್ಯತೆ, ಸರಳತೆ, ವಿದ್ಯಾವಂತ ಯುವಕ ಅಮೃತ್‌ ಶೆಣೈ ಅವರಿಗೆ ಮತ ನೀಡಿದರೆ ಅಭಿವೃದ್ಧಿ ಕಾರ್ಯ ನಡೆಯಲಿದೆ. ಸದಾ ಜನರೊಂದಿಗೆ ಬೆರೆಯುವ ಯುವ ನಾಯಕನನ್ನು ಗೆಲ್ಲಿಸುವಲ್ಲಿ ಯುವಜನತೆ ಶೆಣೈಗೆ ಮತ ನೀಡಬೇಕಾಗಿದೆ ಎಂದರು.

Advertisement

ಅಮೃತ್‌ ಶೆಣೈ ಅಭಿಮಾನಿಗಳಾದ ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು, ಚುನಾವಣಾ ಏಜೆಂಟ್‌ ಯಜ್ಞೆàಶ್‌ ಆಚಾರ್ಯ, ಅಂಗನವಾಡಿ ಶಿಕ್ಷಕಿ ಸರೋಜಾ, ಶಾಹಿದ್‌ ಅಲಿ, ವರದರಾಜ್‌ ಚಿಕ್ಕಮಗಳೂರು, ಎಲನ್‌ ರೋಹನ್‌ ವಾಜ್‌, ಯೋಗೀಶ್‌ ಭಟ್‌, ಅನ್ಸರ್‌ ಅಹಮ್ಮದ್‌ ಉಪಸ್ಥಿತರಿದ್ದರು.
ಮನಃಶಾಸ್ತ್ರಜ್ಞೆ ಜಯಶ್ರೀ ಭಟ್‌ ಸ್ವಾಗತಿಸಿ, ಪ್ರಸ್ತಾವನೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next