Advertisement

ಜಿಎಸ್‌ಟಿ ಯುಪಿಎ ಕೊಡುಗೆ: ಪಾಟೀಲ 

03:45 AM Jul 02, 2017 | |

ವಿಜಯಪುರ: ಜಿಎಸ್‌ಟಿ ನೀತಿ ಯುಪಿಎ ಸರ್ಕಾರದ ಕೊಡುಗೆಯಾಗಿದೆ. ಆಗ ಗುಜರಾತ್‌ ಸಿಎಂ ಆಗಿದ್ದ ನರೇಂದ್ರ ಮೋದಿ ಜಿಎಸ್‌ಟಿ ಅನುಷ್ಠಾನ ವಿರೋಧಿಸಿದ್ದರು. ಇದೀಗ ಅವರೇ ಪ್ರಧಾನಿಯಾಗಿ”ಒಂದು ದೇಶ, ಒಂದೇ ತೆರಿಗೆ’ ಎಂದು ಬಣ್ಣಿಸಿ, ನಮ್ಮ ಸರ್ಕಾರದಸಾಧನೆಯನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಡಾ| ಎಂ.ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ. 

Advertisement

ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಜಿಎಸ್‌ಟಿ ಮಾತ್ರವಲ್ಲ ಆಧಾರ್‌, ಎನ್‌ಆರ್‌ಇಜಿ, ಆಹಾರ ಭದ್ರತೆ, ಬಿಸಿಯೂಟ ಮುಂತಾದ ಹಲವು ಕಾರ್ಯಕ್ರಮಗಳು ಕಾಂಗ್ರೆಸ್‌ ಸರ್ಕಾರದ ಕೊಡುಗೆ. ಆಗ ಈ ಎಲ್ಲ ಯೋಜನೆಗಳನ್ನು ವಿರೋಧಿಸಿದ್ದ ಮೋದಿ ಇದೀಗ ಅವುಗಳನ್ನೇ ಅನುಷ್ಠಾನಗೊಳಿಸಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಎಂದರೆ “ಟಾಕ್‌ ಮೋರ್‌, ವರ್ಕ್‌ ಲೆಸ್‌’ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next