Advertisement

ಉಡುಪು, ಪಾದರಕ್ಷೆ ದುಬಾರಿ

11:05 PM Dec 26, 2021 | Team Udayavani |

ಹೊಸದಿಲ್ಲಿ: ಉಡುಪು ಹಾಗೂ ಪಾದರಕ್ಷೆಗಳನ್ನು ಖರೀದಿಸಲು ಹೊಸ ವರ್ಷದಿಂದಲೇ ದೇಶದ ಬಡ ಹಾಗೂ ಮಧ್ಯಮ ವರ್ಗದವರು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ. ಜ.1ರಿಂದ ಈ ಉತ್ಪನ್ನಗಳ ಜಿಎಸ್‌ಟಿಯನ್ನು ಈಗಿರುವ ಶೇ.5ರಿಂದ ಶೇ.12ಕ್ಕೇರಿಸಲು ನಿರ್ಧರಿಸಲಾಗಿದೆ.

Advertisement

ಕೇಂದ್ರ ಸರಕಾರವು ಒಂದು ಸಾವಿರ ರೂ. ಗಳಿಗಿಂತ ಕಡಿಮೆ ಬೆಲೆಯ ಎಲ್ಲ ಉಡುಗೆಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್ಟಿಯನ್ನು ಶೇ.12ಕ್ಕೇರಿಸಿದೆ. ಹೀಗಾಗಿ, ಇವುಗಳ ದರದಲ್ಲಿ ಏರಿಕೆಯಾಗಲಿದೆ. ಸರಕಾರದ ಈ ನಿರ್ಧಾರದಿಂದಾಗಿ ನಾವು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದೇವೆ ಎಂದು ಸಣ್ಣ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಈಗೀಗ ಜಿಎಸ್ಟಿ ಮಂಡಳಿಯು ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸುವುದನ್ನೇ ಬಿಟ್ಟುಬಿಟ್ಟಿದೆ. ನಿರಂಕುಶ ನಿರ್ಧಾರ  ಕೈಗೊಳ್ಳುತ್ತಿದೆ ಎಂದಿದ್ದಾರೆ.

ಇದೇ ವೇಳೆ, ಕೂಡಲೇ ಜಿಎಸ್‌ಟಿ ಮಂಡಳಿಯ ತುರ್ತು ಸಭೆ ಕರೆದು, ಈ ಉತ್ಪನ್ನಗಳ ಜಿಎಸ್‌ಟಿ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪಶ್ಚಿಮ ಬಂಗಾಲದ ಮಾಜಿ ಹಣಕಾಸು ಸಚಿವ ಅಮಿತ್‌ ಮಿತ್ರಾ ಆಗ್ರಹಿಸಿದ್ದಾರೆ. ಜಿಎಸ್ಟಿ ಹೆಚ್ಚಳ ಜಾರಿಗೆ ಬಂದರೆ, ದೇಶಾದ್ಯಂತ ಒಂದು ಲಕ್ಷ ಜವಳಿ ಘಟಕಗಳು ಮುಚ್ಚಲಿದ್ದು, ಸುಮಾರು 15 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹಾಗಾಗದಂತೆ ತಡೆಯಿರಿ ಎಂದು ಮಿತ್ರಾ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next