Advertisement

GST ಬದಲಾವಣೆ ಅಗತ್ಯ: ಹಸ್ಮುಖ್

06:25 AM Oct 23, 2017 | Team Udayavani |

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಬಗ್ಗೆ ಅಪಸ್ವರ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲೇ ಈಗ ದರ ಶ್ರೇಣಿಯಲ್ಲಿ ಸಂಪೂರ್ಣ ಬದಲಾವಣೆ ಅಗತ್ಯವಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ. 

Advertisement

ಜಿಎಸ್‌ಟಿ ಸುಸ್ಥಿರಗೊಳ್ಳಲು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲಾವಕಾಶ ಬೇಕಿದೆ ಎಂದೂ ಅವರು ಹೇಳಿದ್ದಾರೆ. ಜಾರಿಗೊಳಿಸಿದ ಈ 4 ತಿಂಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಆದರೂ ಸಮಸ್ಯೆಗಳು ಉದ್ಭವಿ ಸುತ್ತಿವೆ. ಮಧ್ಯಮ ಮತ್ತು ಸಣ್ಣ ಉದ್ಯಮಿಗಳು ತೆರಿಗೆ ಪಾವತಿ ಮತ್ತು ಫೈಲಿಂಗ್‌ ಮಾಡುವಲ್ಲಿ ಹಲವು ಸಮಸ್ಯೆ ಎದು ರಿಸುತ್ತಿದ್ದು, ಇದನ್ನು ನಿವಾರಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.

100ಕ್ಕೂ ಹೆಚ್ಚು ಸಾಮಗ್ರಿಗಳ ದರಗಳಲ್ಲಿ ಈಗಾಗಲೇ ಬದಲಾವಣೆ ಮಾಡಲಾಗಿದೆ. ಜತೆಗೆ ರೀಫ‌ಂಡ್‌ ಪ್ರಕ್ರಿಯೆಯನ್ನೂ ಸಡಿಲಗೊಳಿಸಲಾ ಗಿದೆ. ಒಂದು ವಿಭಾಗದಲ್ಲಿ ವಿಭಿನ್ನ ಸಾಮಗ್ರಿಗಳಿಗೆ ವಿಭಿನ್ನ ದರ ಶ್ರೇಣಿ ವಿಧಿಸಿರುವ ಸಾಧ್ಯತೆಯಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಮಸ್ಯೆಯಾಗುತ್ತಿರುವುದು ತಿಳಿಯುತ್ತಿ ದ್ದಂತೆಯೇ ಇದರಲ್ಲಿ ಬದಲಾವಣೆ ಮಾಡಬೇಕಿದೆ ಎಂದು ಅಧಿಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next