Advertisement

ಜಿಎಸ್‌ಟಿ: 4,314 ಕೋ. ರೂ. ಪರಿಹಾರ ಬಿಡುಗಡೆ

06:58 AM Jun 06, 2020 | mahesh |

ಬೆಂಗಳೂರು: ಜಿಎಸ್‌ಟಿ ಜಾರಿಯಿಂದ ರಾಜ್ಯ ಸರಕಾರಕ್ಕೆ ಆಗಿರುವ ನಷ್ಟದ ಪರಿಹಾರವಾಗಿ ಕೇಂದ್ರ ಸರಕಾರ 4,314 ಕೋಟಿ ರೂ. ಬಿಡುಗಡೆ ಮಾಡಿದೆ. 2019 ಡಿಸೆಂಬರ್‌ನಿಂದ 2020ರ ಫೆಬ್ರವರಿವರೆಗಿನ ಮೂರು ತಿಂಗಳ ನಷ್ಟದ ಪರಿಹಾರವಾಗಿ ಕೇಂದ್ರ ಸರಕಾರ ಈ ಹಣ ಬಿಡುಗಡೆ ಮಾಡಿದೆ.

Advertisement

ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜತೆ ಮಾತನಾಡಿ ಜಿಎಸ್‌ಟಿ ಪರಿಹಾರ ಮೊತ್ತ ಬಿಡುಗಡೆಗೆ ಒತ್ತಾಯಿಸಿದ್ದರು. ಈಗ 4,314 ಕೋಟಿ ರೂ. ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.

ಡಿಸೆಂಬರ್‌ನಿಂದ ಫೆಬ್ರವರಿ ವರೆಗೂ ಪರಿಹಾರ ಬಿಡುಗಡೆ ಆಗಿದೆ. ಜುಲೈನಲ್ಲಿ ಮಾರ್ಚ್‌ ಮತ್ತು ಎಪ್ರಿಲ್‌ ತಿಂಗಳ ಪರಿಹಾರ ಬಿಡುಗಡೆ ಆಗಲಿದೆ. ಮಾರ್ಚ್‌ ತಿಂಗಳ ಪರಿಹಾರ 1,800 ಕೋಟಿ ರೂ. ಬರಬೇಕಿದೆ. ಎಪ್ರಿಲ್‌ ಮತ್ತು ಮೇ ತಿಂಗಳ ಪರಿಹಾರ 8,700 ಕೋಟಿ ರೂ. ಬರಬೇಕಿದೆ. ಕೋವಿಡ್ ಪರಿಹಾರ ಬಿಡುಗಡೆ ಬೇರೆ ರಾಜ್ಯಗಳು ಯಾವ ಆಧಾರದಲ್ಲಿ ಕೋವಿಡ್ ನೆರವು ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೊ ಗೊತ್ತಿಲ್ಲ. ನಮಗೆ ಎಸ್‌ ಡಿಆರ್‌ಎಫ್‌ ನಿಧಿಯಡಿ 580 ಕೋಟಿ ರೂ. ಕೊರೊನಾ ಪರಿಹಾರ ಬಿಡುಗಡೆಯಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next