Advertisement

 ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿ: ವೃದ್ಧಾಶ್ರಮಕ್ಕೆ ಸಹಾಯ

02:17 PM Sep 08, 2017 | Team Udayavani |

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಬಾಲಾಜಿ ಸೇವಾ ಸಮಿತಿಯವರಿಂದ ವಸಾಯಿಗಾಂವ್‌ ಕೋಳಿವಾಡಾ ಶ್ರದ್ಧಾನಂದ ವೃದ್ಧಾಶ್ರಮಕ್ಕೆ ಸೆ. 3ರಂದು ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ವೃದ್ಧಾಶ್ರಮದಲ್ಲಿ 56 ಹಿರಿಯ ಮಹಿಳೆಯರಿದ್ದು, ಬಾಲಾಜಿ ಸೇವಾ ಸಮಿತಿಯವರು ಪ್ರತೀ ತಿಂಗಳು ಅಗತ್ಯವಸ್ತುಗಳನ್ನು ನೀಡುವ ಆಶ್ವಾಸನೆ ನೀಡಿದರು.

Advertisement

ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಬಂದಿರುವ ವಸಾಯಿ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿಯು ಸಮಾಜಪರ ಕಾರ್ಯಕ್ರಮಗಳಲ್ಲಿ ಕೂಡಾ ಜವಾಬ್ದಾರಿಯನ್ನು ಹೊಂದಿದೆೆ.

ಈ ಕಾರ್ಯಕ್ರಮದಲ್ಲಿ ಬಾಲಾಜಿ ಸೇವಾ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಸಂಚಾಲಕ ದೇವೇಂದ್ರ ಭಕ್ತ, ಸಹಕಾರ್ಯದರ್ಶಿ ವಿವೇಕಾನಂದ ಭಕ್ತ, ದೇವದಾಸ್‌ ಭಟ್‌, ಮಹಿಳಾ ವಿಭಾಗದ ಸದಸ್ಯೆಯರಾದ ಸವಿತಾ ಪುರುಷೋತ್ತಮ ಕುಡ್ವ, ವೀಣಾ ವಿವೇಕಾನಂದ ನಕ್ತ, ಸುಧಾ ಸತ್ಯೇಂದ್ರ ನಾಯಕ್‌, ಯುವ ವಿಭಾಗದ ಅಪೇಕ್ಷಾ ದೇವೇಂದ್ರ ಭಕ್ತ, ಶ್ರುತಿ, ಪುರುಷೋತ್ತಮ ಶೆಣೈ, ಸದಸ್ಯರಾದ ಚಂದ್ರಕಾಂತ ಹೆಗ್ಡೆ, ರಿತೇಶ್‌ ಪ್ರಭು, ಶ್ರದ್ಧಾನಂದ ವೃದ್ಧಾಶ್ರಮದ ಸಹಾಯಕ ಅಧಿಕಾರಿ ಸುಧಾ ಮರಾಠೆ, ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next