Advertisement

ಹೆದ್ದಾರಿ ಬದಿ ಬೆಳೆಯಲಿದೆ “ಮಿಯಾವಾಕಿ ಕಾಡು’

08:41 PM Aug 03, 2021 | Team Udayavani |

ಪಡೀಲ್‌: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್‌ ರೈಲ್ವೇ ಅಂಡರ್‌ಪಾಸ್‌ ಪಕ್ಕ “ಮಿಯಾವಾಕಿ’ ಮಾದರಿಯ ಕಾಡು ಬೆಳೆಸುವ ಪ್ರಯತ್ನವಾಗಿ 1,000ಕ್ಕೂ ಅಧಿಕ ಗಿಡ ನೆಡುವ ಕಾರ್ಯ ಆರಂಭಗೊಂಡಿದೆ.

Advertisement

ಮಿಯಾವಾಕಿ ಮಾದರಿಯಲ್ಲಿ (ಕಡಿಮೆ ಜಾಗದಲ್ಲಿ ಹೆಚ್ಚು ಗಿಡ ಬೆಳೆಸುವುದು) ಇತರ ಕೆಲವು ಕಡೆಗಳಲ್ಲಿಯೂ ಗಿಡಗಳನ್ನು ಬೆಳೆಸಿದ್ದೇವೆ. ಆದರೆ ಹೆದ್ದಾರಿ ಪಕ್ಕದಲ್ಲಿ ಮಿಯಾವಾಕಿ ಮಾದರಿಯಲ್ಲಿ ಕಾಡು ಬೆಳೆಸುವ ಪ್ರಯತ್ನ ಇದೇ ಪ್ರಥಮ. ಇದು ಡಂಪಿಂಗ್‌ ಯಾರ್ಡ್‌ನಂತಹ ಪ್ರದೇಶವಾಗಿತ್ತು. ರೈಲ್ವೇ ಅಂಡರ್‌ಪಾಸ್‌ನ ಎರಡು ಬದಿಗಳಲ್ಲಿ ಲಭ್ಯವಿದ್ದ ಜಾಗವನ್ನು ಹದಗೊಳಿಸಿದ್ದೇವೆ. ಗರಿಷ್ಠ ಗಿಡಗಳನ್ನು ನೆಡುವ ಉದ್ದೇಶದಿಂದ ಮಿಯಾವಾಕಿ ಮಾದರಿಯನ್ನು ಅನುಸರಿಸುತ್ತಿದ್ದೇವೆ ಎಂದು ಗಿಡಗಳನ್ನು ನೆಡುವ ಜವಾಬ್ದಾರಿ ವಹಿಸಿಕೊಂಡಿರುವ ಪರಿಸರ ಕಾರ್ಯಕರ್ತ ಜೀತ್‌ ಮಿಲನ್‌ ರೋಚ್‌ ಅವರು ಪ್ರತಿಕ್ರಿಯಿಸಿದ್ದಾರೆ.

ಔಷಧ, ಹಣ್ಣಿನ ಗಿಡಗಳಿಗೆ ಆದ್ಯತೆ:

ಇಲ್ಲಿ 110ಕ್ಕೂ ಅಧಿಕ ವಿಧದ ಗಿಡಗಳನ್ನು ನೆಡಲಾಗುತ್ತಿದೆ. ಇದರಲ್ಲಿ ಔಷಧೀಯ ಬಳಕೆಯ ಗಿಡಗಳು ಹೆಚ್ಚಾಗಿವೆ. ಹಕ್ಕಿಗಳಿಗೆ ಆಹಾರವಾಗುವ ಹಣ್ಣುಗಳ ಗಿಡಗಳು, ಹೊಳೆ ದಾಸವಾಳ, ಸಂಪಿಗೆ ಮೊದಲಾದ ಹೂವಿನ ಗಿಡಗಳು, ಶ್ರೀಗಂಧ, ಹಲಸು, ಮೈಸೂರು ನೇರಳೆ, ರೆಂಜಾ, ಮಾವು ಮೊದಲಾದ ಗಿಡಗಳೂ ಇವೆ. ಬಹುತೇಕ ಎಲ್ಲವೂ ಕೂಡ ಸ್ಥಳೀಯ ಪ್ರಭೇದಗಳೇ ಆಗಿವೆ. ಎಳನೀರಿನ ಚಿಪ್ಪು, ಗೊಬ್ಬರ, ಮಣ್ಣನ್ನು ನಿಗದಿತ ಪ್ರಮಾಣದಲ್ಲಿ ಬಳಕೆ ಮಾಡಿ ಗಿಡಗಳನ್ನು ವ್ಯವಸ್ಥಿತವಾಗಿ ನೆಡಲಾಗುತ್ತಿದ್ದು ಇದರ ನಿರ್ವಹಣೆಯ ಹೊಣೆಯನ್ನು ಮಂಗಳೂರು ರೋಟರಿ ಸಿಟಿ ವಹಿಸಿಕೊಂಡಿದೆ. ಜೀತ್‌ಮಿಲನ್‌ ಅವರೊಂದಿಗೆ ಯುಕೆಎಸ್‌ ತಂಡದ ವಿದ್ಯಾಶಂಕರ್‌ ಶೆಟ್ಟಿ, ಹರ್ಷ ಸಾಮ್ರಾಜ್ಯ ಅವರು ಗಿಡಗಳನ್ನು ನೆಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next