Advertisement

ಆರ್ಥಿಕ ಅಭಿವೃದ್ಧಿಗಾಗಿ ಬಿದಿರು ಮೆಳೆ ಬೆಳೆಯಿರಿ

03:50 PM Sep 23, 2019 | Team Udayavani |

ಮಾಗಡಿ: ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ಬಿದಿರು ಮೆಳೆ ಬೆಳೆಯುವುದು ಅವಶ್ಯವಿದೆ ಎಂದು ಕೃಷಿಕ ಸಮಾಜದನವದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್‌ ಸಲಹೆ ನೀಡಿದರು.

Advertisement

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಭಾರತೀಯ ಗಂಧ ಮತ್ತು ಬಿದಿರು ಸೊಸೈಟಿ ಏರ್ಪಡಿಸಿದ್ದ ವಿಶ್ವ ಬಿದಿರು ದಿನಾಚರಣೆ ಪ್ರಯುಕ್ತ ಬಿದಿರು ಉತ್ಪನ್ನಗಳ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಿದಿರಿನಿಂದ ಕಲಾ ಕೌಶಲ್ಯಗಳನ್ನೇ ಧರೆಗಿಳಿಸುವಂತ ಶಕ್ತಿ ಹೊಂದಿದೆ. ಬಿದಿರಿನಿಂದ ಆಟೋಟ ವಸ್ತುಗಳನ್ನು ಪೂಜಾ ಸಾಮಗ್ರಿ, ಬುಟ್ಟಿ, ಬ್ಯಾಗ್‌, ಕುರ್ಚಿ, ಮನೆಯಲ್ಲಿಡುವ ಅಲಂಕಾರಿಕ ವಸ್ತುಗಳನ್ನು ತಯಾರಿಸ ಬಹುದು ಎಂದರು.

ಕೇಂದ್ರದಿಂದ ಸಾಲ ಸೌಲಭ್ಯ: ಬಿದಿರು ಮೆಳೆ ಬೆಳೆಯಲು, ಉತ್ಪನ್ನಗಳ ತಯಾರಿಕೆಗೆ ಕೇಂದ್ರ ಸರ್ಕಾರ ಸಹಾಯ ಧನದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತದೆ. ಗ್ರಾಮೀಣ ಜನತೆ ಯೋಜನೆಯ ಸಹಾಯಧನವನ್ನು ಪಡೆದು ಅರಣ್ಯ ಇಲಾಖೆ ಉಚಿತವಾಗಿ ನೀಡುವ ಬಿದಿರು ಮೆಳೆ ಬೆಳಸಿ, ಆರ್ಥಿಕ ಅಭಿವೃದ್ಧಿಯಾಗಬೇಕು ಎಂದು ಹೇಳಿದರು. ಈ ವೇಳೆ ಬಿದಿರು ಸೊಸೈಟಿ ಅಧ್ಯಕ್ಷ ಸುಂದರ್‌ ನಾಯಕ್‌, ನರಸಿಂಹಯ್ಯ, ಶಾಂತಕುಮಾರ್‌, ಮರಿಮಲ್ಲಪ್ಪ ಮತ್ತು ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next