Advertisement

ಮೊದಲ ರಾತ್ರಿಯಂದೆ ಡೆತ್‌ನೋಟ್‌ ಬರೆದು ಸಾವಿಗೆ ಶರಣಾದ ವರ!

10:59 AM Feb 07, 2018 | Team Udayavani |

ಚಿಕ್ಕಬಳ್ಳಾಪುರ: ಮದುವೆಯ ಸಂಭ್ರಮದಲ್ಲಿರುವಾಗಲೆ ಮೊದಲ ರಾತ್ರಿಯಂದೆ ವರನೊಬ್ಬ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಸೂಲಿಕುಂಟೆ ಎಂಬಲ್ಲಿ  ಮಂಗಳವಾರ ನಡೆದಿದೆ.

Advertisement

ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಬೆಸ್ಕಾಂ ಲೈನ್‌ ಮ್ಯಾನ್‌ ಮುನಿರಾಜು (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಚಿಕ್ಕಬಳ್ಳಾಪುರದ ಕಲ್ಯಾಣಮಂಟಪವೊಂದರಲ್ಲಿ ಅಕ್ಕನ ಮಗಳ ಜೊತೆ ಮದುವೆ ನಡೆದಿತ್ತು. 

ಸಾವಿಗೆ ಶರಣಾಗುವ ಮುನ್ನ ಡೆತ್‌ ನೋಟ್‌ ಬರೆದಿಟ್ಟಿದ್ದು ನನಗೆ ಮದುವೆ ಇಷ್ಟವಿರಲಿಲ್ಲ. ವೈವಾಹಿಕ ಜೀವನವೂ ಇಷ್ಟವಿಲ್ಲ ಹೀಗಾಗಿ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ.ನಾನು ಮಾಡಿರುವ ಸಾಲವನ್ನು ಸಂದಾಯ ಮಾಡಿ  ಎಂದು ಬರೆದಿರುವ ಬಗ್ಗೆ ವರದಿಯಾಗಿದೆ.ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ರೋದನ ಮುಗಿಲು ಮುಟ್ಟಿದೆ. 

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next