Advertisement

Manipur ಸಚಿವ ಖಶಿಮ್‌ ಮನೆ ಮೇಲೆ ಗ್ರೆನೇಡ್‌ ದಾಳಿ

12:51 AM Sep 17, 2024 | Team Udayavani |

ಇಂಫಾಲ: ದಂಗೆಪೀಡಿತ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಸಚಿವ ಖಶಿಮ್‌ ವಶುಮ್‌ ಅವರ ನಿವಾಸದ ಮೇಲೆ ಶಂಕಿತ ಬಂಡುಕೋರರು ಗ್ರೆನೇಡ್‌ ದಾಳಿ ನಡೆಸಿದ್ದಾರೆ. ದಾಳಿಯಿಂದಾಗಿ ಸಚಿವರ ಮನೆಯ ಗೋಡೆಗಳು ಸೇರಿಹಲವೆಡೆ ಹಾನಿಯಾಗಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ಗ್ರೆನೇಡ್‌ ಸ್ಫೋಟದಿಂದ ಚದುರಿದ ತುಣುಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಿಸಿಟಿವಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next