Advertisement

55 ಕೇಂದ್ರಗಳಲ್ಲಿ ಹಸುರು ಯೋಜನೆ: ಸಚಿವ

08:57 PM Jun 07, 2019 | Sriram |

ಬದಿಯಡ್ಕ: ಹಸಿರು ಮಿಷನ್‌ ಆಶ್ರಯದಲ್ಲಿ ಸಿದ್ಧಪಡಿಸುವ ಹಸುರು ಉದ್ಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾಞರಪಳ್ಳಿ ಜಿಎಚ್‌ಎಸ್‌ನಲ್ಲಿ ರಾಜ್ಯ ಕಂದಾಯ ಮತ್ತು ಭವನ ನಿರ್ಮಾಣ ಖಾತೆ ಸಚಿವ ಇ. ಚಂದ್ರಶೇಖರನ್‌ ಉದ್ಘಾಟಿಸಿದರು.

Advertisement

ಮಡಿಕೈ ಗ್ರಾ.ಪಂ., ಜಿಲ್ಲಾ ಸಾಮಾ ಜಿಕ ಅರಣ್ಯೀಕರಣ ವಿಭಾಗ, ಹಸಿರು ಕೇರಳ ಮಿಷನ್‌, ಜೀವ ವೈವಿಧ್ಯ ಮಂಡಳಿ, ಎಂ.ಜಿ.ಎನ್‌.ಆರ್‌.ಇ.ಜಿ., ಕುಟುಂಬಶ್ರೀ ಮೊದಲಾದವುಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆ ಯಿತು. ಬರಿದಾಗುತ್ತಿರುವ ಗ್ರಾಮೀಣ ಸ್ವರೂಪವನ್ನು ಪುನಃ ಸ್ಥಾಪಿಸಲು ಮತ್ತು ನಗರ ಪ್ರದೇಶಗಳಲ್ಲಿ ಹಸುರೀಕರಣದ ಜೀವ ವೈವಿಧ್ಯವನ್ನು ಪುನಃ ಸ್ಥಾಪಿಸುವುದೇ ಇದರ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 20 ಪಂಚಾಯತ್‌ಗಳಲ್ಲಿ ಆಯ್ಕೆ ಮಾಡಿದ 55 ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಸೂಕ್ತ ಸ್ಥಳಗಳನ್ನು ಪತ್ತೆ ಹಚ್ಚಿ ಉದ್ಯಾನ ಸೃಷ್ಟಿಸುವುದು. ಅರಣ್ಯ ಮಾದರಿಯಲ್ಲಿ ಸಸಿ ನೆಟ್ಟು ರಕ್ಷಿಸುವುದು. ಈ ರೀತಿ ಯಲ್ಲಿ ಅರಣ್ಯವನ್ನು ಸೃಷ್ಟಿಸುವ ಮೂಲಕ ವಾತಾವರಣದ ತಾಪವನ್ನು ನಿಯಂತ್ರಿಸುವುದರೊಂದಿಗೆ ಪಕ್ಷಿಗಳ ಸಹಿತ ಇತರ ವನ್ಯಜೀವಿಗಳಿಗೆ ಆವಾಸ ಸ್ಥಾನವನ್ನು ಒದಗಿಸಿದಂತಾಗುವುದು. ಜೀವ ವೈವಿಧ್ಯ ಉದ್ಯಾನಗಳು, ಕಾಡುಗಳ ಸಂರಕ್ಷಣೆ, ಪುನರ್‌ಜೀವ, ಜಲಸಂರಕ್ಷಣೆ ಮೊದಲಾದವುಗಳು ಯೋಜನೆಯ ಪ್ರಧಾನ ಅಂಶಗಳಾಗಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಞಂಗಾಡು ಬ್ಲಾಕ್‌ ಪಂಚಾಯತಿ ಅದ್ಯಕ್ಷ ಎಂ. ಗೌರಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ನಡೆದ ಹಲಸು ಫೆಸ್ಟ್‌ ಉದ್ಘಾಟನೆಯನ್ನು ಮಾಜಿ ಸಂಸದ ಪಿ. ಕರುಣಾಕರನ್‌ ನಿರ್ವಹಿಸಿದರು.

ನಕ್ಷತ್ರ ಅರಣ್ಯೀಕರಣ ಸಾರ್ವಜನಿಕ ಬನ ಸಂರಕ್ಷಣೆಯ ಉದ್ಘಾಟನೆಯನ್ನು ಎಂ.ಗೌರಿ, ಔಷಧ ಸಸ್ಯ ತೋಟವನ್ನು, ಫೋಟೋ ಸಿನಿಮಾ ಪ್ರದರ್ಶನವನ್ನು ಮಡಿಕೈ ಗ್ರಾ.ಪಂ. ಅಧ್ಯಕ್ಷ ಸಿ. ಪ್ರಭಾ ಕರನ್‌ ನಿರ್ವಹಿಸಿದರು. ಕೆ. ಪ್ರಮೀಳಾ, ಎಂ. ಕುಂಞಂಬು, ಶಶೀಂದ್ರನ್‌ ಮಡಿಕೈ, ಎಂ.ಅಬ್ದುಲ್‌ ರಹಮಾನ್‌, ಸಿ. ಇಂದಿರಾ, ಓಮನಾ, ಪಿ.ಕೆ. ಅನೂಪ್‌, ವಿ.ಕೆ. ದಿಲೀಪ್‌, ಎಂ.ಪಿ. ಸುಬ್ರಹ್ಮಣ್ಯನ್‌, ಟಿ.ಟಿ. ಸುರೇಂದ್ರನ್‌, ಪಿ. ಕೃಷ್ಣನ್‌, ಪಿ. ಪ್ರಸೀತಾ, ಬೇಬಿ ಬಾಲಕೃಷ್ಣನ್‌, ಎಂ. ರಾಜನ್‌ ಮತ್ತಿತರರು ಭಾಗವಹಿಸಿದ್ದರು.

Advertisement

ಕಾಸರಗೋಡು ಫಾರೆಸ್ಟ್‌ ಸಹಾಯಕ ಅಧಿಕಾರಿ ಪಿ. ಬಿಜು ಸ್ವಾಗತಿಸಿ, ಸಂಘಟಕ ಸಮಿತಿ ಸಂಚಾಲಕ ಸನಲ್‌ ಷಾ ಮಾಸ್ಟರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next