Advertisement

‘ಗ್ರೀನ್‌ ಮಂಗಳೂರು ಸಾಕಾರ ನಮ್ಮ ಗುರಿ’

02:37 AM Jun 30, 2019 | sudhir |

ಮಹಾನಗರ: ನಗರದಲ್ಲಿ ಹಸುರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2001 ರಲ್ಲಿ ಶೇ. 20ರಷ್ಟಿದ್ದ ಹಸುರಿನ ಪ್ರಮಾಣ ಪ್ರಸ್ತುತ ಶೇ.18ರಷ್ಟಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು.

Advertisement

ಗ್ರೀನ್‌ ಮಂಗಳೂರು, ಮಹಾನಗರ ಪಾಲಿಕೆ ವತಿಯಿಂದ ನಗರದ ಸಂಘನಿಕೇತನದಲ್ಲಿ ಶನಿವಾರ ನಡೆದ ’10 ಸಾವಿರ ಸಸಿ ನೆಡುವ ಮಹಾ ಅಭಿಯಾನ’ ಗ್ರೀನ್‌ ಮಂಗಳೂರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಹಸುರು ಕಡಿಮೆಯಾದ ಕಾರಣ ಈ ವರ್ಷ ಮಳೆ ಕೊರತೆ ಅನುಭವಿಸುತ್ತಿದ್ದೇವೆ. ಚೆನ್ನೆ ೖನಲ್ಲಿ ಇದೇ ಪರಿಸ್ಥಿತಿ ಬಂದಾಗ ಅಂತರ್ಜಲ ವೃದ್ಧಿಗಾಗಿ ಗಿಡ ನೆಟ್ಟಿದ್ದರು. ಮಂಗಳೂರಿನಲ್ಲಿ ಗಿಡ ನೆಡುವ ಜತೆಗೆ ಮಳೆಕೊಯ್ಲು, ಇಂಗುಗುಂಡಿ ರಚನೆ ಮೂಲಕ ಗ್ರೀನ್‌ ಮಂಗಳೂರು ಸಾಕಾರ ನಮ್ಮ ಗುರಿಯಾಗಿದೆ ಎಂದರು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

ವಿಶ್ವಹಿಂದೂ ಪರಿಷತ್‌ ಮುಖಂಡ ಎಂ.ಬಿ. ಪುರಾಣಿಕ್‌ ಮಾತನಾಡಿ, ಮರ, ಗಿಡಗಳಿಲ್ಲದೆ ಮಾನವ ಬದುಕಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಗಿಡ ನೆಟ್ಟು ಪರಿಸರ ಸಂರಕ್ಷಿಸಬೇಕು ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಪ್ರಾಂತ ಸಹ ಸಂಘ ಚಾಲಕ ಡಾ| ಪಿ. ವಾಮನ ಶೆಣೈ ಅವರು ಗಿಡ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Advertisement

ಮುಂದಿನ ದಿನಗಳಲ್ಲಿ ಪ್ರತೀ ಶನಿವಾರ ಗಿಡ ನೆಡಲಾಗುವುದು. ಆರಂಭಿಕ ಹಂತದಲ್ಲಿ ನಗರದಲ್ಲಿ 10 ಸಾವಿರಕ್ಕೂ ಅಧಿಕ ಗಿಡ ನೆಟ್ಟು,ಸಸಿಗಳನ್ನು ಪೋಷಿಸಲು ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಂಘ – ಸಂಸ್ಥೆಗಳು, ವಿದ್ಯಾರ್ಥಿಗಳು, ವಕೀಲರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಎಂದು ವೇದವ್ಯಾಸ ಕಾಮತ್‌ ಹೇಳಿದರು.

ಪ್ರತೀ ಶನಿವಾರ ಗಿಡ ನೆಡಲಾಗುವುದು

ಮುಂದಿನ ದಿನಗಳಲ್ಲಿ ಪ್ರತೀ ಶನಿವಾರ ಗಿಡ ನೆಡಲಾಗುವುದು. ಆರಂಭಿಕ ಹಂತದಲ್ಲಿ ನಗರದಲ್ಲಿ 10 ಸಾವಿರಕ್ಕೂ ಅಧಿಕ ಗಿಡ ನೆಟ್ಟು,ಸಸಿಗಳನ್ನು ಪೋಷಿಸಲು ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಂಘ – ಸಂಸ್ಥೆಗಳು, ವಿದ್ಯಾರ್ಥಿಗಳು, ವಕೀಲರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಎಂದು ವೇದವ್ಯಾಸ ಕಾಮತ್‌ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next