Advertisement

ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ಸಂಪನ್ನ

07:05 AM Jan 15, 2018 | Team Udayavani |

ಶೃಂಗೇರಿ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಕುಟುಂಬದವರು ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಕೈಗೊಂಡಿದ್ದ
ಅತಿರುದ್ರ ಮಹಾಯಾಗದ ಪೂರ್ಣಾಹುತಿ ಸಮರ್ಪಣಾ ಕಾರ್ಯ ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಭಾನುವಾರ ನೆರವೇರಿತು.

Advertisement

ಶ್ರೀಮಠದಲ್ಲಿ ಎದುರಿನ ಶ್ರೀ ಚಂದ್ರಶೇಖರ ಭಾರತಿ ಸಭಾಂಗಣದ ಯಾಗಶಾಲೆಯಲ್ಲಿ ಜ.3 ರಿಂದ ಅತಿರುದ್ರ ಮಹಾಯಾಗ ಆರಂಭಗೊಂಡಿತ್ತು.

12 ದಿನಗಳ ಕಾಲ ನಡೆದ ಅತಿರುದ್ರ ಮಹಾಯಾಗದಲ್ಲಿ 150 ಕ್ಕೂ ಹೆಚ್ಚು ಋತ್ವಿಜರು ಭಾಗವಹಿಸಿದ್ದರು. ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಭಾನುವಾರ ಪೂರ್ಣಾಹುತಿ ನೆರವೇರಿತು. ಎಚ್‌.ಡಿ. ದೇವೇಗೌಡ, ಪತ್ನಿ ಚನ್ನಮ್ಮ, ಮಕ್ಕಳಾದ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ, ಎಚ್‌.ಡಿ. ಬಾಲಕೃಷ್ಣೇಗೌಡ, ಅನಿತಾ ಕುಮಾರಸ್ವಾಮಿ, ಭವಾನಿ, ಪ್ರಜ್ವಲ್‌ಗೌಡ ಸಪರಿವಾರ ಸಮೇತರಾಗಿ ಪೂರ್ಣಾಹುತಿ ಸಮರ್ಪಿಸಿ ಜಗದ್ಗುರುಗಳ ಆಶೀರ್ವಾದ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next