Advertisement

ಉತ್ತಮ ನಾಯಕತ್ವದಿಂದ ದೇಶಕ್ಕೆ ದೊಡ್ಡ ಸೇವೆ

06:00 AM Aug 10, 2017 | Team Udayavani |

ಮಡಂತ್ಯಾರು: ಶಿಕ್ಷಣ ಕ್ರೇತ್ರದಿಂದಲೇ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಯುವಶಕ್ತಿ ಸಮಾಜಕ್ಕೆ ಮಾದರಿಯಾಗಬೇಕು. ವಿದ್ಯಾರ್ಥಿನಿಯರು ಕೂಡ ನಾಯಕತ್ವ  ವಹಿಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಒಳ್ಳೆಯ ಲಕ್ಷಣ. ಉತ್ತಮ ನಾಯಕತ್ವದ ಮೂಲಕ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದರು.

Advertisement

ಅವರು ಬುಧವಾರ ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.
ದೇಶದ ಮುಂದಿನ ನಾಯಕನಾಗಲು ವಿದ್ಯಾರ್ಥಿ ಸಂಘ ಉತ್ತಮ ಅವಕಾಶ. ದೇಶಕ್ಕೆ ಉತ್ತಮ ನಾಯಕರ ಕೊಡುಗೆ ನೀಡಬೇಕಿದೆ. ನಾಯಕತ್ವ  ನಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಮೂಲಕ ಜೀವನ ಶೈಲಿಯೇ ಬದಲಾಗುತ್ತದೆ. ಕಲಿಕೆಯಲ್ಲಿ ಸೌಲಭ್ಯ ಇಲ್ಲದಿದ್ದರೂ ಛಲ, ಉತ್ಸಾಹ ಇದ್ದರೆ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಚರ್ಚ್‌ನ ಧರ್ಮಗುರು ಫಾ| ಬೇಸಿಲ್‌ ವಾಸ್‌ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್‌ ಐವನ್‌ ಸಿಕ್ವೇರಾ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕ್ಸಿಂ ಅಲುºಕರ್ಕ್‌, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಧವ ಗೌಡ, ಚರ್ಚ್‌ನ ಉಪಾಧ್ಯಕ್ಷರು ರೊನಾಲ್ಡ್‌ ಸಿಕ್ವೇರಾ, ಪ್ರೊ| ವಿನ್ಸೆಂಟ್‌ ಡಿ’ಸೋಜಾ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಲೆಕ್ಸ್‌ ಐವನ್‌ ಸಿಕ್ವೇರಾ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಅಕ್ಷತಾ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next