Advertisement

ಜಾತಿ ನೋಡಿ ಅನುದಾನ ನೀಡಲ್ಲ

11:36 AM Feb 03, 2018 | Team Udayavani |

ಕಾಳಗಿ: ಕಾಂಗ್ರೆಸ್‌ ಸರ್ಕಾರ ಜಾತಿ, ಮತದ ಸಂಖ್ಯೆ ನೋಡಿ ರಾಜಕೀಯ ಉದ್ದೇಶದಿಂದ ಅನುದಾನ ನೀಡೋದಿಲ್ಲ, ಸಣ್ಣ
ಪುಟ್ಟ ಜನಸುಮುದಾಯವನ್ನು ಗಣನೆಗೆ ತೆಗೆದುಕೊಂಡು ಅನುದಾನ ನೀಡುತ್ತದೆ ಎಂದು ಶಾಸಕ ಡಾ| ಉಮೇಶ ಜಾಧವ್‌ ಹೇಳಿದರು.

Advertisement

ಇಲ್ಲಿನ ಮುಖ್ಯಬಜಾರ್‌ನಲ್ಲಿ ಭಾವಸಾರ ಕ್ಷತ್ರೀಯ ಸಮಾಜ ಮುಖಂಡರು ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಸರ್ವ ಜನಾಂಗದ ವಿಕಾಸ ಬಯಸುವ ಪಕ್ಷವಾಗಿದೆ. ಸರ್ಕಾರ ನೀಡಿರುವ 40 ಲಕ್ಷ ರೂ. ಅನುದಾನವನ್ನು ಭಾವಸಾರ ಕ್ಷತ್ರೀಯ ಸಮಾಜದ ಮುಖಂಡರು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ಬರುವ ದಿನಗಳಲ್ಲಿ ಇನ್ನು 60 ಲಕ್ಷ ರೂ. ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಭಾವಸಾರ ಕ್ಷತ್ರೀಯ ಸಮಾಜ ಅಭಿವೃದ್ಧಿಗೆ ಶಾಸಕ ಡಾ| ಉಮೇಶ ಜಾಧವ್‌, ಜಿಪಂ ಮಾಜಿ ಸದಸ್ಯ ಜಗದೇವ ಗುತ್ತೇದಾರ ಕೊಡುಗೆ ಅಪಾರವಾಗಿದೆ ಎಂದು ಮುಖಂಡ ರವಿದಾಸ ಪತಂಗೆ ಹೇಳಿದರು. 

ಮುಖಂಡರಾದ ನಿಂಬೆಣಪ್ಪ ಕೋರವಾರ, ರಾಘವೇಂದ್ರ ಗುತ್ತೇದಾರ, ಪರಮೇಶ್ವರ ಮಡಿವಾಳ, ಚಂದ್ರಕಾಂತ ಜಾಧವ,  ಜಿಯಾವುದ್ದಿನ್‌ ಸೌದಾಗರ, ಪ್ರಕಾಶ ಕಠಾರೆ, ಮಾರುತಿ ಪತಂಗೆ, ಸಂತೋಷ ಬಾಸುತ್ಕರ್‌, ಪ್ರಕಾಶ ಸೇಗಾಂವಕರ್‌, ಕಲ್ಯಾಣರಾವ್‌ ಡೊಣ್ಣೂರ, ಬಾಬು ಹೀರಾಪುರ, ಮಲ್ಲಿಕಾರ್ಜುನ ಡೊಣ್ಣೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next