Advertisement

ಅನುದಾನ ತಾರತಮ್ಯ: ಪ್ರತಿಭಟನೆ

04:19 PM Dec 29, 2019 | Team Udayavani |

ಮಳವಳ್ಳಿ: ಪುರಸಭೆಯ ಕೆಲವೊಂದು ವಾರ್ಡ್‌ಗಳಿಗೆ ಶಾಸಕರು ಹಾಗು ಅಧಿಕಾರಿಗಳು ಅನುದಾನ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆ ಕಾಂಗ್ರೆಸ್‌ ಸದಸ್ಯರು ಹಾಗೂ ಮುಖಂಡರು ಪಟ್ಟಣದ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಶಾಸಕರು 23 ಪುರಸಭೆ ಸದಸ್ಯರನ್ನು ಕರೆಸಿ ಸಭೆ ನಡೆಸಿ ವಾರ್ಡ್‌ಗಳಿಗೆ ಅವಶ್ಯಕವಿರುವ ಕಾಮಗಾರಿಗಳನ್ನು ನಡೆಸುವ ಬಗ್ಗೆ ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದರು. ಆದರೇ ಸರ್ಕಾರದಿಂದ ಪ್ರಸಕ್ತ ಸಾಲಿನಲ್ಲಿ ಬಂದಂತಹ 2.49 ಕೋಟಿ ರೂ. ಅನುದಾನದಲ್ಲಿ 23 ವಾರ್ಡ್ ಗಳಿಗೂ ಹಂಚಿಕೆ ಮಾಡಬೇಕಿತ್ತು. ಆದರೇ 3,4,8,15,18,19,21 ವಾರ್ಡ್ ಗಳಿಗೆ ಯಾವುದೇ ಅನುದಾನ ನೀಡಿಲ್ಲ, ಬೇರೆ ವಾರ್ಡ್‌ಗಳಿಗೆ ಎರಡು ಮೂರು ಭಾರಿ ಅನುದಾನ ನೀಡುತ್ತಿದ್ದರೂ ರಾಜಕೀಯ ವೈಷಮ್ಯದಿಂದ ನಮ್ಮ ವಾರ್ಡ್‌ಗಳಿಗೆ ಅನುದಾನ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಕೆಲಸಗಳು ಯಾವುದೂ ನಡೆಯುತ್ತಿಲ್ಲ. ಇಲ್ಲಿರುವ ಅಧಿಕಾರಿಗಳು ಇಷ್ಟಬಂದ ರೀತಿಯಲ್ಲಿ ವರ್ತಿಸುತ್ತಾರೆ. ಇಲ್ಲಿ ಹೇಳುವವರೂ ಕೇಳುವವರು ಯಾರೂ ಇಲ್ಲದಂತಾಗಿದೆ ಈ ಬಗ್ಗೆ ಜನಪ್ರತಿನಿಧಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. 19ನೇ ವಾಡ್‌ ಪುರಸಭೆ ಸದಸ್ಯ ಶಿವಸ್ವಾಮಿ, 15ನೇ ವಾರ್ಡ್‌ನ ರಾಜಶೇಖರ್‌ ಪುರಸಭೆ ಮಾಜಿ ಸದಸ್ಯರಾದ ಗಂಗರಾಜೇ ಅರಸ್‌, ಕೃಷ್ಣ, ವೆಂಕಟೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next