Advertisement

ಉಡುಪಿ: ಗ್ರಾ.ಪಂ. ಉಪ ಚುನಾವಣೆ : ಸಂತೆ –ಜಾತ್ರೆ ನಿಷೇಧ ; ಡಿಸಿ ಆದೇಶ

05:28 PM Mar 27, 2021 | Team Udayavani |

ಉಡುಪಿ:  ಜಿಲ್ಲೆಯಲ್ಲಿ ಮಾರ್ಚ್ 29 ರಂದು ನಡೆಯಲಿರುವ ಗ್ರಾಮ ಪಂಚಾಯತ್  ಉಪ ಚುನಾವಣೆಯ ಮತದಾನದ ಹಿನ್ನಲೆಯಲ್ಲಿ ಸಂತೆ ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶವನ್ನು ಹೊರಡಿಸಿದ್ದಾರೆ.

Advertisement

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕರು ಮತ ಹಾಕಲು ಅನುಕೂಲವಾಗುವಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ,ಕಾಪು ತಾಲೂಕಿನ ಶಿರ್ವ-12 ಕ್ಷೇತ್ರದ ಗ್ರಾಮ ಪಂಚಾಯತ್ ,ಕುಂದಾಪುರ ತಾಲೂಕಿನ ಕುಂಭಾಶಿ-3 ಕ್ಷೇತ್ರದ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬರುವ ಸಂತೆ ಜಾತ್ರೆಗಳಿಗೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ : ವಿವಾಹ ವಿಚ್ಛೇದನಕ್ಕೆ ವಿದಾಯ, ದಾಂಪತ್ಯಕ್ಕೆ ಶ್ರೀಕಾರ: ಮುನಿಸು ಮರೆತು ಮತ್ತೆ ಒಂದಾದ ಜೋಡಿಗಳು

ದೇವಸ್ಥಾನಗಳಲ್ಲಿ ಜಾತ್ರೆಯ ಬಗ್ಗೆ ನಡೆಯುವ ಧಾರ್ಮಿಕ ಆಚರಣೆಗಳನ್ನು ದೇವಸ್ಥಾನದ ಸಿಬ್ಬಂದಿಗಳು ಮಾತ್ರ ಸೇರಿಕೊಂಡು ಸರಳವಾಗಿ ಆಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next