Advertisement

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಮುಂದೂಡಿಕೆ

08:41 PM Jun 08, 2020 | Hari Prasad |

ಬೆಂಗಳೂರು: ಕೋವಿಡ್ 19 ಸೋಂಕಿನ ಕಾರಣದಿಂದ ಮುಂಜಾಗರೂಕತಾ ಕ್ರಮವಾಗಿ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಮತದಾರರ ಭಾಗೀದಾರಿಕೆಯಲ್ಲಿ ಚುನಾವಣೆಗಳನ್ನು ನಡೆಸುವುದು ಅಸಾಧ್ಯವಾಗಿರುವ ಕಾರಣದಿಂದ ಮೆಲ್ಮನೆಗೆ ನಡೆಯಬೇಕಿದ್ದ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ತಲಾ ಎರಡು ಸ್ಥಾನಗಳ ಚುನಾವಣೆಯನ್ನು ಮುಂದೂಡಲಾಗಿದೆ.

Advertisement

ರಾಜ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿನ ತಲಾ ಎರಡು ಸ್ಥಾನಗಳ ಅವಧಿ ಇದೇ ತಿಂಗಳ 30ಕ್ಕೆ ಮುಕ್ತಾಯಗೊಳ್ಳುತ್ತಿತ್ತು.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕಿನ ಬಾಧೆ ಜೋರಾಗಿರುವುದರಿಂದ ಮತ್ತು ಈ ಕಾರಣದಿಂದ ಚುನಾವಣಾ ಸಂಬಂಧಿತ ಪೂರ್ವಭಾವಿ ಹಾಗೂ ಚುನಾವಣಾ ತಯಾರಿಗಳನ್ನು ನಡೆಸುವುದು ಅಸಾಧ್ಯವೆಂದು ಕಂಡುಬಂದಿರುವ ಕಾರಣದಿಂದ ಹಾಗೂ ಲಾಕ್ ಡೌನ್ ಸಂಬಂಧಿತವಾಗಿ ಕೇಂದ್ರ ಗೃಹ ಇಲಾಖೆಯ ಮಾರ್ಗದರ್ಶಿ ನಿಯಮಗಳು ಜಾರಿಯಲ್ಲಿರುವುದನ್ನು ಮನಗಂಡು ಚುನಾವಣಾ ಆಯೋಗವು ಈ ನಾಲ್ಕು ಕ್ಷೇತ್ರಗಳ ಚುನಾವಣೆಯನ್ನು ಅನಿರ್ಧಾಷ್ಟವಧಿಗೆ ಮುಂದೂಡಿ ಆದೇಶವನ್ನು ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next