Advertisement

Top 50 ಯೂಟ್ಯೂಬರ್ ಗಳ ಜೊತೆ ಸಚಿವ ಪಿಯೂಷ್ ಗೋಯಲ್ ಸಂವಾದ

07:02 PM Jun 25, 2023 | Team Udayavani |

ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಕರಕುಶಲ ವಸ್ತುಗಳನ್ನು ಜನಪ್ರಿಯಗೊಳಿಸುವುದು, ಧಾನ್ಯಗಳ ಪ್ರಯೋಜನಗಳು ಮತ್ತು ಗ್ರಾಹಕರ ಜಾಗೃತಿಯಂತಹ ವಿವಿಧ ವಿಷಯಗಳ ಕುರಿತು ಭಾರತದ 50 ಕ್ಕೂ ಹೆಚ್ಚು ಯೂಟ್ಯೂಬರ್‌ಗಳೊಂದಿಗೆ ಸಂವಾದ ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 23 ರಂದು ಸಂವಾದ ನಡೆಸಲಾಯಿತು.

Advertisement

ಚರ್ಚೆಯಲ್ಲಿ ಭಾಗವಹಿಸಿದ ಯೂಟ್ಯೂಬರ್‌ಗಳಲ್ಲಿ ವಿವೇಕ್ ಬಿಂದ್ರಾ, ಗೌರವ್ ಚೌಧರಿ (ತಾಂತ್ರಿಕ ಗುರೂಜಿ), ವಿರಾಜ್ ಶೇತ್ (ಮಾಂಕ್ ಎಂಟರ್‌ ಟೈನ್‌ ಮೆಂಟ್ ಸಹ-ಸಂಸ್ಥಾಪಕ), ಗಣೇಶ್ ಪ್ರಸಾದ್ (ಥಿಂಕ್ ಸ್ಕೂಲ್), ಶ್ಲೋಕ್ ಶ್ರೀವಾಸ್ತವ (ಟೆಕ್ ಬರ್ನರ್), ಪ್ರಫುಲ್ ಬಿಲ್ಲೂರ್ (ಎಂಬಿಎ ಚಾಯ್ ವಾಲಾ), ಮತ್ತು ಅನುಷ್ಕಾ ರಾಥೋಡ್ (ಅನುಷ್ಕಾ ರಾಥೋಡ್ ಫಿನಾನ್ಸ್) ಮತ್ತಿತರರ ಜೊತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಸಂವಾದ ನಡೆಸಿದರು.

ಇದನ್ನೂ ಓದಿ:ಟರ್ಕಿ, ಅರೇಬಿಕ್‌, ಪಾಕಿಸ್ತಾನದ ಉಪಕರಣಗಳೊಂದಿಗೆ ‘ಬ್ಲಿಂಕ್’ ರೇ-ರೆಕಾರ್ಡಿಂಗ್

ಸಚಿವ ಪಿಯೂಷ್ ಗೋಯಲ್ ಅವರು ಭಾರತದಲ್ಲಿ ಉನ್ನತ ಯೂಟ್ಯೂಬರ್‌ ಗಳ ಆಸಕ್ತಿದಾಯಕ ಗುಂಪಿನೊಂದಿಗೆ ‘ಸಂಪರ್ಕ್ ಸೆ ಸಂವಾದ್’ ಎಂಬ ಫಲಪ್ರದ ಸಂವಾದವನ್ನು ನಡೆಸಿದರು ಎಂದು ಸಚಿವಾಲಯ ಹೇಳಿದೆ.

ಗ್ರಾಹಕರ ಜಾಗೃತಿ ಮತ್ತು ರಕ್ಷಣೆ (ನಕಲಿ ವೆಬ್‌ಸೈಟ್‌ಗಳ ಮೇಲೆ ವಿಶೇಷ ಗಮನ), ಸೈಬರ್ ಭದ್ರತೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಮಾರ್ಗಗಳು, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಜನಪ್ರಿಯಗೊಳಿಸುವುದು ಮತ್ತು ಧಾನ್ಯಗಳ ಪ್ರಯೋಜನಗಳ ಕುರಿತು ಹೆಚ್ಚಿನ ಕಂಟೆಟ್ ಮಾಡಿವ ಬಗ್ಗೆ ಸಂವಾದದ ಸಮಯದಲ್ಲಿ ಚರ್ಚಿಸಲಾಗಿದೆ.

Advertisement

ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಸೇರಿದಂತೆ ಐದು ನಿರ್ಣಯಗಳನ್ನು ಮತ್ತಷ್ಟು ಪ್ರಚಾರ ಮಾಡಲು ಯೂಟ್ಯೂಬರ್ ಗಳನ್ನು ಸಚಿವರು ಆಹ್ವಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next