Advertisement

ಗೌರಿ ಹತ್ಯೆ ತನಿಖೆ ಮುಗಿಯಲಿ,ಬಳಿಕ ಸತ್ಯ ಗೊತ್ತಾಗುತ್ತೆ:ಪ್ರಕಾಶ್‌ ರೈ

01:56 PM Jun 18, 2018 | |

ಚಿಕ್ಕಬಳ್ಳಾಪುರ: ಗೌರಿ ಹತ್ಯೆ ತನಿಖೆ ಕೊನೆ ಹಂತಕ್ಕೆ ಬಂದಿದ್ದು, ಅಂತಿಮವಾಗಿ ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರ ಬರಲಿದೆ.ಯಾರು ಕೊಲೆ ಮಾಡಿದ್ದಾರೆ ಎಂದು ತಿಳಿಯಲಿದೆ ಅಲ್ಲಿಯವರೆಗೆ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ ಎಂದು ನಟ ಪ್ರಕಾಶ್‌ ರೈ ಹೇಳಿದ್ದಾರೆ. 

Advertisement

ಸೋಮವಾರ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಸಂಜಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ. 

ಇಷ್ಟು ದಿನಗಳ ಕಾಲ ಗೌರಿ ಹಂತಕರನ್ನು ಹಿಡಿದಿಲ್ಲ ಅಂತ ಹೇಳುತ್ತಾ ಇದ್ರಿ , ಈಗ ಎಸ್‌ಐಟಿ ಆರೋಪಿಗಳನ್ನು ಹಿಡಿಯುತ್ತಿದೆ. ಯಾರೂ ಯಾರ ಮೇಲೆ ಆರೋಪ ಹೊರಿಸುವುದು ಬೇಡ . ಮುಂದೆ ಸಮಾಜದಲ್ಲಿ ಇನ್ನೊಂದು ಗೌರಿಯ ಹತ್ಯೆ ಆಗದಂತೆ ನೋಡಿಕೊಳ್ಳೋಣ ಎಂದರು.

ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳಲು ನಾನು ಯಾರು? ನಾನು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ ಎನ್ನುವುದು ಮೂರ್ಖತನದ ಮಾತು. ಯಾರಪ್ಪನ ಆಸ್ತಿ ಯಾರು ದತ್ತು ತೆಗೆದುಕೊಳ್ಳುವುದು? ನಾನು ಅಳಿಲು ಸೇವೆಯಷ್ಟೇ ಮಾಡುತ್ತಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಸಂಘ ಸಂಸ್ಥೆಗಳ ಬೆನ್ನು ತಟ್ಟುತ್ತಿದ್ದೇನೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next