Advertisement

ಆರ್‌ಬಿಐ, ಸರಕಾರದಿಂದ ಹಣಕಾಸು ವಂಚನೆ ಕೇಸು ನಿರ್ವಹಣೆ

12:14 PM Jan 04, 2019 | Team Udayavani |

ಹೊಸದಿಲ್ಲಿ : ಒಂದು ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಇಂಟರ್‌ನೆಟ್‌ ಹಣಕಾಸು ವಂಚನೆಯ ಕೇಸುಗಳನ್ನು ನಿರ್ವಹಿಸುವ ದಿಶೆಯಲ್ಲಿ ಸರಕಾರ ಆರ್‌ಬಿಐ ಜತೆಗೂಡಿ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಐಟಿ ಸಚಿವ ರವಿ ಶಂಕರ್‌ ಪ್ರಸಾದ್‌ ಅವರಿಂದು ರಾಜ್ಯಸಭೆಗೆ ತಿಳಿಸಿದರು. 

Advertisement

ಹಣಕಾಸು ವಿದ್ಯುನ್ಮಾನ ಮಾಹಿತಿ ಸಂರಕ್ಷಣೆಯ ಮಸೂದೆಯ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ಈ ಮಸೂದೆಯು ಸಾಮಾಜಿಕ ಜಾಲ ತಾಣಗಳಿಗೆ ಸಂಬಂಧಿಸಿ ನಡೆಯುವ ಮಾಹಿತಿ ಕಳವನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಸಚಿವರು ತಿಳಿಸಿದರು.

ಒಂದು ಲಕ್ಷ ರೂ.ಗಳಿಗೂ ಮೀರಿದ ಕ್ರೆಡಿಟ್‌, ಡೆಬಿಟ್‌ ಮತ್ತು ಎಟಿಎಂ ಕಾರ್ಡುಗಳು ಹಾಗೂ ಇಂಟರ್‌ನೆಟ್‌ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವ ದಿಶೆಯಲ್ಲಿ ಸರಕಾರ ಆರ್‌ಬಿಐ ಜತೆಗೆ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next